ಹೊನ್ನಾವರ ತಾಲೂಕಾ ಪಂಚಾಯತ ಅನುದಾನದಿಂದ ವಿಶೇಷ ಚೇತನ ಫಲಾನುಭವಿಗಳಿಗೆ ನೀಡುವ ದ್ವಿಚಕ್ರವಾಹನಗಳನ್ನು ಭಟ್ಕಳ -ಹೊನ್ನಾವರ ಶಾಸಕ ಸುನೀಲ ನಾಯ್ಕರವರು ಗುರುವಾರ ವಿತರಿಸಿದರು.
ತಾಲ್ಲೂಕಾ ಪಂಚಾಯತ ಸಭಾಭವನದಲ್ಲಿ ೧೦ ಫಲಾನುಭವಿಗಳಿಗೆ ದ್ವಿಚಕ್ರವಾಹನಗಳನ್ನು ವಿತರಿಸಿ ಮಾತನಾಡಿದ ಅವರು ಸರ್ಕಾರ ವಿಶೇಷ ಚೇತನ ಹೊಂದಿದವರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ, ಅಧಿಕಾರಿಗಳು ಅವರು ಹೆಚ್ಚಿನ ಸೌಲಭ್ಯ ವಿತರಿಸಲು ಸಹಕಾರ ನೀಡಬೇಕೆಂದರು. ತನ್ನ ವಿಧಾನ ಸಭಾ ಕ್ಷೇತ್ರದಲ್ಲಿ ಎಲ್ಲಿಯೂ ವಿಶೇಷ ಚೇತನವುಳ್ಳವರಿದ್ದರು ತಮಗೆ ಮಾಹಿತಿ ನೀಡಿದಲ್ಲಿ ಸರ್ಕಾರ ಎಲ್ಲಾ ಸೌಲಭ್ಯ ದೊರಕಿಸಿಕೊಡುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಪಟ್ಟಣ ಪಂಚಾಯತ ಅಧ್ಯಕ್ಷರ ಶಿವರಾಜ ಮೇಸ್ತರವರು ಮಾತನಾಡಿ ಶಾಸಕ ಸುನೀಲ ನಾಯ್ಕರವರು ಕ್ಷೇತ್ರದ ಜನತೆಗೆ ಹೆಚ್ಚಿನ ಸೌಲಭ್ಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ತಾಲ್ಲೂಕಾ ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಸುರೇಶ ನಾಯ್ಕ ಮಾತನಾಡಿ ಭಟ್ಕಳ ವಿಧಾನಸಭಾಕ್ಷೇತ್ರದಲ್ಲಿ ೧೦ ದ್ವಿಚಕ್ರವಾಹನಗಳು ಹಾಗೂ ಕುಮಟಾ ವಿಧಾನಸಭಾಕ್ಷೇತ್ರದಲ್ಲಿ ೩ ದ್ವಿಚಕ್ರವಾಹನಗಳು ತಾಲ್ಲೂಕಾ ಪಂಚಾಯತ ಅನುದಾನದಿಂದ ಮಂಜೂರಾಗಿದ್ದು ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೆಕೆಂದರು. ಎಲ್ಲಾಗ್ರಾಮ ಪಂಚಾಯತಗಳು ಘನತ್ಯಾಜ್ಯ ಘಟಕಗಳನ್ನು ಮಾಡಲು ಮುಂದೆ ಬರಬೇಕೆಂದರು,
ಈ ಸಂದರ್ಭದಲ್ಲಿ ಕಾಸರಕೋಡ , ಹೇರಂಗಡಿ ಗ್ರಾಮ ಪಂಚಾಯತಗಳಿಗೆ ಮಂಜೂರಾದ ಘನತ್ಯಾಜ್ಯ ವಿಲೇವಾರಿ ಘಟಕದ ವಾಹನಗಳನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಚಿಕ್ಕನಕೋಡ ಗ್ರಾಮಪಂಚಾಯತ ಅಧ್ಯಕ್ಷ ವಿಘ್ನೇಶ್ವರ ಹೆಗಡೆ, ನಗರಬಸ್ತಿಕೇರಿ ಗ್ರಾಮಪಂಚಾಯತ ಅಧ್ಯಕ್ಷ ಮಂಜುನಾಥ ನಾಯ್ಕ,ಹೆರಂಗಡಿ ಗ್ರಾಮಪಂಚಾಯತ ಅಧ್ಯಕ್ಷ ಮಹೇಶ ನಾಯ್ಕ, ಹೊನ್ನಾವರ ಮಂಡಲ ಬಿಜೆಪಿ ಅಧ್ಯಕ್ಷ ರಾಜು ಭಂಡಾರಿ,ಎಮ್ ಎಸ್ ಹೆಗಡೆ ಕಣ್ಣಿ ಮುಂತಾದವರು ಉಪಸ್ಥಿತರಿದ್ದರು.
More Stories
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೂಜಳ್ಳಿಯ ಹಿರಿಯ ಜೀವ ಅನಸೂಯಾ ಹೆಗಡೆ,
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,