May 19, 2024

Bhavana Tv

Its Your Channel

ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಹೊನ್ನಾವರ ಇದರ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ

ಹೊನ್ನಾವರ: ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಹೊನ್ನಾವರ ಇದರ ವತಿಯಿಂದ ಜುಲೈ ೨೧ ರಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೬೨೫ ಕ್ಕೆ ೬೨೫ ಅಂಕಗಳನ್ನು ಗಳಿಸಿ ಶೇಕಡಾ ೧೦೦ ಸಾಧನೆ ಮಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ಭೂಮಿಕಾ ಕೃಷ್ಣ ನಾಯ್ಕ್ ಗೆರುಸೊಪ್ಪಾ ಹಾಗು ೬೨೫ ಕ್ಕೆ ೬೨೧ ಅಂಕಗನ್ನು ಪಡೆದು ಶೇಕಡ ೯೯ .೩೬ ಸಾಧನೆ ಮಾಡಿ ರಾಜ್ಯಕ್ಕೆ ೪ ನೇ ರೇಂಕ್ ಗಳಿಸಿದ ಕುಮಾರಿ ದೀಕ್ಷಿತಾ ಮಾಹಾದೇವ್ ನಾಯ್ಕ್ ಗೆರುಸೊಪ್ಪಾ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಿ ಎಸ್ ಎನ್ ಡಿ ಪಿ ತಾಲುಕ ಅಧ್ಯಕ್ಷರಾದ ಧನಂಜಯ್ ನಾಯ್ಕ್ ರಾಯಲಕೇರಿ, ಪ್ರಧಾನ ಕಾರ್ಯದರ್ಶಿಗಳಾದ ಸಂತೋಶ್ ನಾಯ್ಕ್ ಗೆರುಸೊಪ್ಪಾ, ಗೌರವಾಧ್ಯಕ್ಷರಾದ ರಾಮನಾಥ್ ನಾಯ್ಕ್ , ಉಪಧ್ಯಕ್ಷರಾದ ದಿನೇಶ ನಾಯ್ಕ್ , ಕಾರ್ಯದರ್ಶಿಗಳಾದ ಶ್ರಿನಿವಾಸ ನಾಯ್ಕ್, ಸಂಘಟನಾ ಕಾರ್ಯದರ್ಶಿಗಳಾದ ಮಂಜುನಾಥ್ ಶರಣ್ ಗೆರುಸೊಪ್ಪಾ , ವ್ಯಾಪಾರಸ್ಥ ಘಟಕ ಅದ್ಯಕ್ಷರಾದ ಪ್ರದೀಪ ನಾಯ್ಕ್,ಸಹ ಸಂಚಾಲಕರಾದ ರಾಘವೇದ್ರ ಸಿಡಿ, ಚಾಲಕ ಘಟಕ ಅದ್ಯಕ್ಷರಾದ ಗಣಪತಿ ನಾಯ್ಕ್, ಸಹ ಕಾರ್ಯದರ್ಶಿಗಳಾದ ಅವಿನಾಶ ನಾಯ್ಕ್, ಸಾಮಾಜಿಕ ಜಾಲತಾಣ ಸಂಚಾಲಕರಾದ ಸಂದೀಪ ನಾಯ್ಕ್ , ಸ್ಥಳೀಯರಾದ ಸಂದೀಪ ನಾಯ್ಕ್ ಮೊಗೆಹಳ್ಳ, ಶಿಕ್ಷಕರಾದ ಸುದೀಶ್ ನಾಯ್ಕ್ , ಎಂ ಜಿ ನಾಯ್ಕ್, ಪಿ ಆರ್ ನಾಯ್ಕ್ ಮತ್ತಿತರರು ಹಾಜರಿದ್ದರು.

error: