ಹೊನ್ನಾವರ : ಪಟ್ಟಣದ ಗಂಧದಹಿತ್ತ ರಸ್ತೆಯ ನಾಗರ ಕಟ್ಟೆ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಹಳದಿಪುರದ ಸಾಲಿಕೇರಿಯ ಗಿರೀಶ ರಾಮಾ ಗೌಡ ಓ. ಸಿ ಅಂಕೆ-ಸoಖ್ಯೆಗಳ ಮೇಲೆ ಪಂಥವಾಗಿ ಕಟ್ಟಿಸಿಕೊಂಡು ಓ. ಸಿ ಮಟ್ಕಾ ಜುಗಾರಾಟ ಆಡುತ್ತಿದ್ದಾಗ ದಾಳಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
ಓಸಿ ಮಟ್ಕಾದ ಒಟ್ಟಾದ ಹಣವನ್ನು ಹಾಗು ಓಸಿ ಚೀಟಿಯನ್ನು ಓಸಿ ಬುಕ್ಕಿಯಾದ ವಿನಾಯಕ ರಾಮ ಗೌಡ, ಕೊಳಗದ್ದೆ ಖರ್ವಾ ಹೊನ್ನಾವರ ಇವರಿಗೆ ನೀಡುತ್ತಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದ್ದು ವಿನಾಯಕ ಗೌಡನ ಮೇಲು ಪ್ರಕರಣ ದಾಖಲಿಸಲಾಗಿದೆ.
ದಾಳಿ ಸಮಯದಲ್ಲಿ ಒಟ್ಟು ನಗದು ಹಣ ೧೫೧೦ ರೂಪಾಯಿ, ಬಾಲ್ ಪೆನ್ನು -೦೧, ಓ. ಸಿ. ಅಂಕಿ ಸಂಖ್ಯೆ ಬರೆದ ಚೀಟಿ-೦೧ ನೇಯವುಗಳೊಂದಿಗೆ ಸಿಕ್ಕಿದೆ. ಆರೋಪಿತರ ಮೇಲೆ ಸರಕಾರದ ಪರವಾಗಿ ಕಲಂ: ೭೮(ಎ)(೩) ಕೆ.ಪಿ. ಆ್ಯಕ್ಟ್ ಅದರಂತೆ ಪ್ರಕರಣ ದಾಖಲಿಸಲಾಗಿದೆ.
ವರದಿ: ವೆಂಕಟೇಶ ಮೇಸ್ತ ಹೊನ್ನಾವರ
More Stories
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೂಜಳ್ಳಿಯ ಹಿರಿಯ ಜೀವ ಅನಸೂಯಾ ಹೆಗಡೆ,
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,