ಹೊನ್ನಾವರ ತಾಲೂಕಿನ “ಗುಂಡಬಾಳ ನಂಬರ್ ಒನ್” ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಸುಧಾ ಭಂಡಾರಿಯವರನ್ನು ಸನ್ಮಾನಿಸಿ ಗೌರವದಿಂದ ಬೀಳ್ಕೊಡಲಾಯಿತು…
ಕಳೆದ ೨೫ ವರ್ಷಗಳಿಂದ 'ಗುಂಡಬಾಳ ನಂಬರ್ ಒನ್' ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಮಾಣಿಕ ಹಾಗೂ ಮಾದರಿಯಾಗಿ ಶಿಕ್ಷಕಿ ಸುಧಾ ಭಂಡಾರಿ ಸೇವೆ ಸಲ್ಲಿಸಿದ್ದರು. ಇಲಾಖೆಯ ನಿಯಮನುಸಾರ ವರ್ಗಾವಣೆಯಾದ ಕಾರಣ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿ, ಸುಧಾ ಭಂಡಾರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಸುಧಾ ಭಂಡಾರಿ ಬರೆಯುವ ಅಭ್ಯಾಸವಿದ್ದ ನನಗೆ, ಈ ಶಾಲೆಯ ಸಾಂಸ್ಕೃತಿಕ ಜವಾಬ್ಧಾರಿ ಹೆಗಲೇರಿದಾಗ ಲೇಖಕಿಯಾಗಿ ಗುರುತಿಸಿಕೊಳ್ಳಲು ಅನುಕೂಲವಾಯಿತು. ಈ ಶಾಲೆಯ ಪರಿಸರ ಹಾಗೂ ಊರಿನವರ ಸಹಕಾರವನ್ನು ನಾನೆಂದಿಗೂ ಮರೆಯುವಂತಿಲ್ಲ ಎಂದರು.
ಆರೋಗ್ಯಮಾತಾ ಪ್ರೌಢ ಶಾಲೆಯ ಮುಖ್ಯೋಪಧ್ಯಾಯ ವಿಲ್ಸನ್ ಮಾತನಾಡಿ ನಮ್ಮ ಹೈಸ್ಕೂಲ್ ವಿದ್ಯಾರ್ಥಿಗಳು ನನ್ನ ಅನುಮತಿ ಪಡೆದು ಈ ಬೀಳ್ಕೊಡುಗೆ ಸಮಾರಂಭದಲ್ಲಿ, ಸುಧಾ ಟೀಚರನ್ನು ಗೌರವಿಸಲು ಬಂದಿದ್ದಾರೆ. ಸುಧಾರ ಹಾಗೂ ವಿದ್ಯಾರ್ಥಿಗಳ ನಡುವಿನ ಸಾಮರಸ್ಯದ ಸಂಬAಧಕ್ಕೆ ಇದು ಉತ್ತಮ ನಿದರ್ಶನ ಎಂದು ಅಭಿಪ್ರಾಯಪಟ್ಟರು.
ಶಾಲೆಯ ಪೂರ್ವ ವಿದ್ಯಾರ್ಥಿ ವಿನೋದ ಗೌಡ ಮಾತನಾಡಿ ಸುಧಾ ಟೀಚರ್ ಅವರು ವಿದ್ಯೆ ಜೊತೆಗೆ ವಿನಯವನ್ನೂ ಕಲಿಸುತ್ತಿದ್ದರು. ಬಹುಶಃ ಈ ಕಾರಣದಿಂದಲೇ ನನಗಾಗಲೀ ನನ್ನ ಸಹಪಾಠಿಗಳಿಗಾಗಲೀ ಸಮಾಜದಲ್ಲಿ ಸನ್ನಡತೆಯ ಮಾರ್ಗದಲ್ಲಿ ಉತ್ತಮ ಉದ್ಯೋಗ ಮಾಡುವ ಅವಕಾಶ ಲಭಿಸಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಸಿ.ಆರ್.ಪಿ ಸುನಿತಾ ಸೇರಿದಂತೆ ಮತ್ತಿತರರು ಮಾತನಾಡಿ ಸುಧಾರ ಪ್ರಾಮಾಣಿಕ ಸೇವೆ ಹಾಗೂ ಪ್ರತಿಭೆಯನ್ನು ಶ್ಲಾಘಿಸಿದರು.
ಸವಿ ನೆನಪಿಗಾಗಿ ಸುಧಾ ಭಂಡಾರಿ, ಶಾಲೆಗೆ ರಾಷ್ಟ್ರಭಕ್ತರ ಫೋಟೋ ಹಾಗೂ ಹಣವನ್ನು ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕವೃಂಧ, ಎಸ್ ಡಿ ಎಮ್ ಸಿ, ಹಾಲಿ ಹಾಗೂ ಪೂರ್ವ ವಿದ್ಯಾರ್ಥಿಗಳು, ಸ್ಥಳೀಯ ಜನಪ್ರತಿನಿಧಿ ಸೇರಿದಂತೆ ಊರ ನಾಗರಿಕರು ಉಪಸ್ಥಿತರಿದ್ದರು.
More Stories
ಖಾಸಗಿ ಬಸ್ ಪಲ್ಟಿಯಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ, ೨ ಸಾವು
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ