ಹೊನ್ನಾವರ ; ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೊಕಾ ಮನೆ ಮನೆಗೆ ತೆರಳಿ ಹಲವರಿಗೆ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡಿದರು. ಮೊದಲನೆಯದಾಗಿ ತಾಲೂಕು ಪಂಚಾಯತ ಹೊನ್ನಾವರದ ಮಾಜಿ ಅಧ್ಯಕ್ಷೆ ಶ್ರೀಮತಿ ಗೌರಿ ಮುಕ್ರಿ ಇವರ ಮನೆಗೆ ತೆರಳಿ ಇವರ ಕಾಂಗ್ರೆಸ್ ಸದಸ್ಯತ್ವ ನವೀಕರಣಗೊಳಿಸಿದರು. ಅದೇ ರೀತಿ ಅವರ ಕುಟುಂಬದ ಸದಸ್ಯರಿಗೆ ಸದಸ್ಯತ್ವ ನೋಂದಣಿ ಮಾಡಲಾಯಿತು.
ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರುಗಳು ಮತ್ತು ಪದಾಧಿಕಾರಿಗಳು ಸದಸ್ಯತ್ವ ನೋಂದಣಿ ಅಭಿಯಾನದ ಮೂಲಕ ಬ್ರಹತ್ ಪ್ರಮಾಣದಲ್ಲಿ ತಮ್ಮ ತಮ್ಮ ಬೂತ್ ಗಳಲ್ಲಿ ಶನಿವಾರ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳುವಂತೆ ಕೆಪಿಸಿಸಿ ಮತ್ತು ರಾಜ್ಯ ಕಿಸಾನ್ ಕಾಂಗ್ರೆಸ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಹಲವೆಡೆ ಸದಸ್ಯತ್ವ ನೋಂದಣಿ ಅಭಿಯಾನ ಕೈಗೊಂಡಿತು.
ಕಡತೋಕಾ, ಚಂದಾವರ, ಸಾಲಕೋಡ್, ಕರ್ಕಿ, ಹಳದಿಪುರ, ಕೆಕ್ಕಾರ್, ಮುಂತಾದ ಕಡೆ ಹಲವರಿಗೆ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ವಿನೋದ್ ನಾಯ್ಕ, ಹೊನ್ನಾವರ ಬ್ಲಾಕ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಹರಿಶ್ಚಂದ್ರ ನಾಯ್ಕ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ್, ಮಮತಾ ಶೇಟ್, ಮಹೇಶ್ ನಾಯ್ಕ ಸಂಕೊಳ್ಳಿ, ನಾಗವೇಣಿ ಗೌಡ , ಜಿಲ್ಲಾ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಗಜಾನನ ನಾಯ್ಕ ಸಾಲಕೋಡ್, ನವೀನ ನಾಯ್ಕ ಹಳದಿಪುರ, ರಾಮಚಂದ್ರ ನಾಯ್ಕ, ಹಿರಿಯ ಮುಖಂಡರುಗಳಾದ ಜನಾರ್ಧನ ನಾಯ್ಕ ಹಳದಿಪುರ, ಕೆ ಎಂ ನಾಯ್ಕ ಸಾಲಕೋಡ್, ನಾಗೇಶ್ ನಾಯ್ಕ, ಶ್ರೀನಾಥ್ ಶೆಟ್ಟಿ ಕಡತೊಕಾ, ಶ್ರೀಮತಿ ರೂಪಾ ಗೌಡ ಕೆಕ್ಕಾರ್, ಸುಬ್ರಾಯ ಗೌಡ ಕೆಕ್ಕಾರ್, ಪುರಂದರ ನಾಯ್ಕ, ಚಂದ್ರಕಾAತ ನಾಯ್ಕ ಚಂದಾವರ, ವಿನಯ ನಾಯ್ಕ ಕಡನೀರ, ರವಿ ಪಟಗಾರ ಮಾಡಗೇರಿ, ವಿನಾಯಕ ನಾಯ್ಕ, ಕಿರಣ್ ಭಂಡಾರಿ, ಪುರಂದರ ಗುಡ್ಡಿನಕಟ್ಟು, ಬಾಲು ಭಂಡಾರಿ, ಗಿರೀಶ್ ಗೌಡ ಹಳದಿಪುರ, ಮಹೇಶ್ ನಾಯ್ಕ ಹಳದಿಪುರ, ಶ್ರೀಪಾದ ಗೌಡ ಮುಂತಾದವರು ಭಾಗವಹಿಸಿದ್ದರು.
More Stories
ಸಾನ್ವಿ ರಾವ್ ಹೊನ್ನಾವರ, ದ್ವೀತಿಯ ಪಿಯುಸಿ ಕಾಮರ್ಸ ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ. :
ಬಿಜೆಪಿ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಏನೂ ಮಾಡಿಲ್ಲ: ಮಂಕಾಳ ವೈದ್ಯ ಟೀಕೆ
ಬಿಜೆಪಿ ಬಿಜೆಪಿ ಎಂದು ಕುಣಿಯುವ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್: ದೇಶಪಾಂಡೆ