May 17, 2024

Bhavana Tv

Its Your Channel

ದಿ.ದಿಕ್ಷೀತ ಗಂಗಾಧರ ನಾಯ್ಕ ನೆನಪಿನಲ್ಲಿ ವಾಲಿಬಾಲ್ ಟೂರ್ನಮೆಂಟ್

ಹೊನ್ನಾವರ: ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾಪಟು, ಆಳ್ವಾಸ್ ಜ್ಯೂನಿಯರ್ ತಂಡದ ಆಟಗಾರನಾಗಿ ಹೆಸರು ಮಾಡಿದ್ದ ವಾಲಿಬಾಲ್ ಕ್ರೀಡಾಪಟು ದಿ.ದಿಕ್ಷೀತ್ ಗಂಗಾಧರ ನಾಯ್ಕ ಅವರ ಮಿತ್ರರು ಸೇರಿ `ದಿಕ್ಷೀತ ಫ್ರೆಂಡ್ಸ’ ಹೆಸರಿನಲ್ಲಿ ಆವ್ಹಾನಿತ ತಂಡಗಳಿಗೆ ವಾಲಿಬಾಲ್ ಟೂರ್ನಾಮೆಂಟನ್ನು ಭಾನುವಾರ ಏರ್ಪಡಿಸಲಾಗಿತ್ತು. .

ಹೊನ್ನಾವರ ತಾಲೂಕಿನ ಕರ್ಕಿ ನಾಕಾ ಬಳಿ ನಡೆದ ಕ್ರೀಡಾಕೂಟವನ್ನು ದೀಕ್ಷೀತ್ ತಂದೆ ಗಂಗಾಧರ ನಾಯ್ಕ ತಾಯಿ ಹಾಗೂ ಸಹೋದರಿ ಮತ್ತು ಶಿಕ್ಷಕ ಡಾ.ಸುರೇಶ ತಾಂಡೇಲರವರು ಚಾಲನೆ ನೀಡಿದರು.  ಪ್ರಥಮ ಸ್ಥಾನವನ್ನು ಮಹಾಕಾಳಿ ತಂಡ ಹೊನ್ನಾವರ, ದ್ವಿತೀಯ ಸ್ಥಾನವನ್ನು ಮಹಾಸತಿ ತಂಡ ಹಳದೀಪುರ, ತೃತೀಯ ಸ್ಥಾನವನ್ನು ಮಹಾಸತಿ ಆರೋಳ್ಳಿ ತಂಡ ಪಡೆಯಿತು. ದೀಕ್ಷಿತ್ ಫ್ರೆಂಡ್ಸ್ ತಂಡವು ನಾಲ್ಕನೆ ಸ್ಥಾನ ಪಡೆಯಿತು. ಬೆಸ್ಟ್ ಎಟೆಕರ್ ವಿನಾಯಕ ಮುಕ್ರಿ ಹಳದೀಪುರ, ಬೆಸ್ಟ್ ಪಾಸರ್ ಪ್ರವೀಣ ಶೆಟ್ಟಿ ಹೆಗಡೆ, ಬೆಸ್ಟ್ ಆಲ್‌ರೌಂಡರ್ ಆಗಿ ಕಾರ್ತಿಕ್ ಗೌಡ ಆರೊಳ್ಳಿ, ಬೆಸ್ಟ್ ಲಿಬ್ರೊ ಆಗಿ ರಮೇಶ ಮುಕ್ರಿ ಹಳದೀಪುರ ಬಹುಮಾನ ಪಡೆದರು. ವಿಜೇತರಿಗೆ ತುಳಸಿದಾಸ ಶೇಷಗಿರಿ ನಾಯ್ಕ ಮತ್ತಿತರರು ಬಹುಮಾನ ವಿತರಿಸಿದರು. ಸಂಘಟಕರು ಶಿಸ್ತಿನಿಂದ ಕೀಡಾಕೂಟ ಏರ್ಪಡಿಸಿದರು.
error: