May 19, 2024

Bhavana Tv

Its Your Channel

ಫೆ.16ಕ್ಕೆ ಅಳ್ಳಂಕಿಯ ಶ್ರೀ ವರಸಿದ್ಧಿ ಗಣಪತಿ ದೇವರ ವರ್ಷಾವಧಿ ತಾಂತ್ರಿಕ ವರ್ಧಂತಿ ಮಹೋತ್ಸವ

ಹೊನ್ನಾವರ :ತಾಲ್ಲೂಕಿನ ಅಳ್ಳಂಕಿಯ ಶ್ರೀವರಸಿಧ್ಧಿಗಣಪತಿ ದೇವರ ವರ್ಷಾವಧಿ ತಾಂತ್ರಿಕ ವರ್ಧಂತಿ ಮಹೋತ್ಸವ ಕಾರ್ಯಕ್ರಮವು ಇದೇ ಬರುವ ದಿನಾಂಕ 16 ಬುಧವಾರ ರಂದು ವೇ/ಮೂ/ಕಟ್ಟೆ ಶಂಕರ ಪರಮೇಶ್ವರ ಭಟ್ಟರ ಆಚಾರ್ಯತ್ವದಲ್ಲಿ ನಡೆಯಲಿದೆ. ಲೋಕಕಲ್ಯಾಣಾರ್ಥವಾಗಿ ಅಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊoಡು ವಿಶೇಷ ವಿನಾಯಕ ಶಾಂತಿ, ಕಲಶಾಭಿಷೇಕ,ಪೂರ್ಣಾಹುತಿ. ಅಲಂಕಾರ ಪೂಜೆ ಮಧ್ಯಾಹ್ನ ಸಾಮೂಹಿಕ ಸತ್ಯನಾರಾಯಣ ವ್ರತ ಪೂಜೆ, ಮಹಾಪೂಜೆ, ಪ್ರಸಾದವಿತರಣೆ ಮತ್ತುಮದ್ಯಾಹ್ನ 1ರಿಂದ 3 ಘಂಟೆಯವರೆಗೆ ಅನ್ನಸಂತರ್ಪಣೆ ಇರುತ್ತದೆ. ಸಂಜೆ 6.00ರಿಂದ ಭೇರಿತಾಡನ, ರಂಗಪೂಜೆ, ಮಹಾಬಲಿ, ರಾಜೊಪಚಾರಸೇವೆ, ಮಹಾಮಂಗಳಾರತಿ, ಪ್ರಾರ್ಥನೆ, ಪ್ರಸಾದವಿತರಣೆ ನಡೆಯಲಿದೆ.
ನಂತರ ಖ್ಯಾತ ಹಿಂದುಸ್ಥಾನಿ ಗಾಯಕ ರಾಘವೇಂದ್ರ ಭಟ್ ಸಾಗರ್, ವಿದ್ವಾನ್ ಎನ್. ಜಿ. ಹೆಗಡೆ, ವಿದ್ವಾನ್ ಶೇಷಾದ್ರಿ ಅಯ್ಯಂಗಾರ್ ಮತ್ತು ಹರಿಶ್ಚಂದ್ರ ನಾಯ್ಕ ಇವರ ತಂಡದಿAದ ದಾಸವಾಣಿ ಸಂಗೀತ ಮತ್ತು ರಾಜು ಸೊಂದಾ ಅವರಿಂದ ನಗು ನಲಿ ಸೇವೆಯು ಸಹ ಇರುತ್ತದೆ. ಅಂದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಳ್ಳುವ ಜೊತೆಯಲ್ಲಿ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಿ ದೇವತಾ ಕಾರ್ಯಗಳನ್ನು ಸಹಕರಿಸಬೇಕೆಂದು ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಚಂದ್ರಕಾAತ ಕೊಚರೇಕರ ವಿನಂತಿಸಿದ್ದಾರೆ

error: