ಹೊನ್ನಾವರ: ಮೈಸೂರಿನಲ್ಲಿ ನಡೆದ 2022 ಸಾಲಿನ ಕರ್ನಾಟಕ ಮಹಿಳಾ ರತ್ನ ಅವಾರ್ಡ್ ವಿಭಾಗದಲ್ಲಿ ಸಮಾಜಸೇವೆ ವಿಭಾಗದಲ್ಲಿ ಕರ್ನಾಟಕ ಮಹಿಳಾ ರತ್ನಅವಾರ್ಡ್ ಹೊನ್ನಾವರದ ಸಹನಾ ಯಶವಂತರವರಿಗೆ ದೊರೆತಿದೆ.
ಇವರು ಹೊನ್ನಾವರ ಬಂದರ್ರೋಡ್ ಐಡಿಯಲ್ ಎಲೆಕ್ಟ್ರಾನಿಕ್ಸ್ ಮಾಲಕರಾದ ಯಶವಂತ್ ನಾಯ್ಕರವರ ಧರ್ಮಪತ್ನಿಯವರಾಗಿದ್ದಾರೆ, ಉತ್ತರಕನ್ನಡ ಮೂಲದವರಾದ ಇವರು ಪ್ರತಿಷ್ಟಿತ ಅದಮಾರು ಮಠದ ಚಿಕ್ಕಮಗಳೂರು ಜಿಲ್ಲೆಯ ಸಂಗಮೇಶ್ವರ ಪೇಟೆಯ ಪೂರ್ಣ ಪ್ರಜ್ಞಾ ವಿದ್ಯಾಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಸತಿ ನಿಲಯದಲ್ಲಿ ವಾರ್ಡನ್ ಆಗಿ 8 ವರ್ಷ ಸೇವೆ ಸಲ್ಲಿಸಿದ್ದಾರೆ. ಕಳೆದ 6ವರ್ಷಗಳಿಂದ ಸ್ಥಳೀಯ ಗೃಹಿಣಿಯರಿಗೆ ವಯಸ್ಕ ಮಹಿಳೆಯರಿಗೆ ಉಚಿತವಾಗಿ ಯೋಗತರಬೇತಿ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಸಮಾಜಮುಖಿ ಲೇಖನ ಹಾಗೂ ಪ್ರತಿಲಿಪಿ ಮೂಲಕ ಬರವಣಿಗೆಯಲ್ಲಿ ಇವರು ತೊಡಗಿಸಿಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದದಲ್ಲಿ ಕೋವಿಡ್ ಮುಂಜಾಗ್ರತಾ ಬಗ್ಗೆ,ಸಲಹೆ ನೀಡಿದ್ದರು. ಜನರಿಗೆ ಅರಿವು ಮೂಡಿಸುವಕಾರ್ಯದಲ್ಲಿ ತುಂಬಾ ಪ್ರಯತ್ನಪಟ್ಟಿದ್ದರು.
ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ , ಪದ್ಮಶ್ರೀ ಮಂಜಮ್ಮಜೋಗ್ತಿ, ನಟಿ ವಾಣಿ ಶ್ರೀ, ಚಂದನ ಮುಂತಾದವರು ಉಪಸ್ಥಿತರಿದ್ದರು.
More Stories
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೂಜಳ್ಳಿಯ ಹಿರಿಯ ಜೀವ ಅನಸೂಯಾ ಹೆಗಡೆ,
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,