May 4, 2024

Bhavana Tv

Its Your Channel

ಹೊನ್ನಾವರ ಹೈವೆ ಸರ್ಕಲ್ ಬಳಿ ಅಗ್ನಿ ದುರಂತ ,ನಾಲ್ಕು ಅಂಗಡಿಗಳು ಸುಟ್ಟು ಭಸ್ಮ , ಲಕ್ಷಾಂತರ ರೂಪಾಯಿ ಹಾನಿ.

ಹೊನ್ನಾವರ; ಇಲ್ಲಿಯ ಹೈವೆ ಸರ್ಕಲ್ ಬಳಿ ಸೋಮವಾರ ನಸುಕಿನ ಜಾವ್ _5-45ಕ್ಕೆ ಅಗ್ನಿ ದುರಂತದಿoದ ನಾಲ್ಕು ಅಂಗಡಿಗಳು ಬೆಂಕಿಗಾಹುತಿಯಾಗಿವೆ.
ಗಣಪತಿ ಸೋಮಯ್ಯ ನಾಯ್ಕರವರ ಹೂವಿನ ಅಂಗಡಿ, ಗೋವಿಂದ ಶೆಟ್ಟಿಯವರ ತರಕಾರಿ ಅಂಗಡಿ,ಹಾಗೂ ಮಹೇಶ ನಾಗಪ್ಪ ನಾಯ್ಕರವರ ಹಣ್ಣಿನ ಅಂಗಡ ಗಳು ಸಂಪೂರ್ಣ ಸುಟ್ಟು ಹೋಗಿದ್ದು ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುವಂತಾಗಿದೆ. ಬೆಳಿಗ್ಗಿನ ಜಾವ ಅಂಗಡಿ ಮುಚ್ಚಿದ್ದರಿಂದ ಸ್ಥಳದಲ್ಲಿ ಯಾರು ಇರಲಿಲ್ಲ. ವಿಷಯ ತಿಳಿದು ಅಗ್ನಿಶಾಮಕ ದಳವರು ಅಕ್ಕಪಕ್ಕ ಬೆಂಕಿ ಹರಡಂತೆ ತಡೆಯಲು ಯಶಸ್ವಿಯಾಗಿದ್ದಾರೆ. ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ತಹಶಿಲ್ದಾರರ ನಾಗರಾಜ ನಾಯ್ಕಡ್ ಹಾಗೂ ಪೋಲಿಸ್ ಇಲಾಖೆಯವರು ಆಗಮಿಸಿದ್ದರು.

error: