ಹೊನ್ನಾವರ :- 2021-22 ನೇ ಸಾಲಿನಲ್ಲಿ ನಡೆದ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ 4 ವಿದ್ಯಾಥಿüðಗಳು ತೇರ್ಗಡೆ ಹೊಂದಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ . ಸಿಸ್ಕೊ ಸಂಭ್ರಮ ಬೆಂಗಳೂರು ಇವರ ಸಹಕಾರ & ಕುಮಟಾ – ಹೊನ್ನಾವರ ತಾಲುಕಿನ ಹಲವು ಸಂಪನ್ಮೂಲ ವ್ಯಕ್ತಿಗಳು ತರಬೇತಿ ಹಾಗೂ ಮಾರ್ಗದರ್ಶನ ನೀಡಿರುತ್ತಾರೆ . ಈ ವಿದ್ಯಾರ್ಥಿಗಳು 9ನೇ ತರಗತಿಯಿಂದ 12ನೇ ತರಗತಿಯವರೆಗೆ ಮಾಸಿಕ 1000/ – ದಂತೆ 48000/ ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ
ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಕುಮಾರಿ ಅಶ್ವಿನಿ ಈರು ಗೌಡ , ಧನ್ಯಾ ತಿಮ್ಮಣ್ಣ ನಾಯ್ಕ , ಮೇಘಾ ರಾಮ ಗೌಡ , ಅಮೃತ ಎಮ್ . ಶೇಟ್ . ಇವರಿಗೆ ಹಾಗೂ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿಗಳಿಗೆ ಮಾನ್ಯಕ್ಷೇತ್ರಶಿಕ್ಷಣಾಧಿಕಾರಿಗಳು ಹೊನ್ನಾವರ ಸಿಸ್ಕೊ ಸಂಭ್ರಮ ಬೆಂಗಳೂರು ಹಾಗೂ ಊರನಾಗರಿಕರು ಅಭಿನಂದಿಸಿದ್ದಾರೆ ಶ್ರೀ ಚೆನ್ನಕೇಶವ ವಿದ್ಯಾಸಂಸ್ಥೆಯ ಅಧ್ಯಕ್ಷರು ಗಜಾನನ ಹೆಗಡೆಯವರು ಆಡಳಿತ ಮಂಡಳಿಯ ಸದಸ್ಯರು , ಮುಖ್ಯಾಧ್ಯಾಪಕರಾದ ಎಲ್. ಎಮ್. ಹೆಗಡೆ ಯವರು ಮತ್ತು ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ.
More Stories
ಖಾಸಗಿ ಬಸ್ ಪಲ್ಟಿಯಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ, ೨ ಸಾವು
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ