May 19, 2024

Bhavana Tv

Its Your Channel

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯಿಂದ ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮ

ಹೊನ್ನಾವರ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಹೊನ್ನಾವರ ಇವರಿಂದ ಪ್ರೌಢಶಾಲಾ ಸಹಶಿಕ್ಷಕ ಸಂಘಕ್ಕೆ ಆಯ್ಕೆಯಾದ ಸತೀಶ ಡಿ ನಾಯ್ಕ ಕೆ.ಪಿ.ಎಸ್ ಮಂಕಿ, ಸತೀಶ ಜಿ ನಾಯ್ಕ ಸರ್ಕಾರಿ ಪ್ರೌಢಶಾಲೆ ಶಾಲೆ ಜಲವಳ್ಳಿ ಕರ್ಕಿ, ರೋನಿ ಗೊನ್ಸಾಲ್ವಿಸ್ ಸರ್ಕಾರಿ ಪ್ರೌಢಶಾಲೆ ಕೋಟೆಬೈಲ್, ಪ್ರಕಾಶ ನಾಯ್ಕ ಸರ್ಕಾರಿ ಪ್ರೌಢಶಾಲೆ ಚಿತ್ತಾರ ಇವರನ್ನು ಸನ್ಮಾನಿಸಲಾಯಿತು.
ಈ ಸಭೆಗೆ ಮುಖ್ಯ ಅತಿಥಿಯಾಗಿ ಪಾಲ್ಗೋಂಡ ನಿವೃತ್ತ ಶಿಕ್ಷಕರು ಜಿ ಎಚ್ ನಾಯ್ಕ ಸನ್ಮಾನಿಸಿ ಸಂಘಟನೆಯ ಕುರಿತಾಗಿ ಕಿವಿಮಾತು ಹೇಳಿದರು. ಹಾಗೂ ಹೊನ್ನಾವರ ತಾಲೂಕಿನಲ್ಲಿ ಸಂಘದ ಅತ್ಯುತ್ತಮ ಸಂಘಟನೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಅಧ್ಯಕ್ಷತೆ ವಹಿಸಿದ ರಾಜಕುಮಾರ ಟಿ ನಾಯ್ಕ ಮಾತನಾಡಿ ರಾಜ್ಯ ಸರಕಾರ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿಯವರು ಯಾವತ್ತೂ ನೌಕರರ ಹಿತ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ ನಾವೆಲ್ಲ ಒಟ್ಟಾಗಿ ಕೇಂದ್ರ ರಾಜ್ಯ ಸಂಘವನ್ನು ಒಲಪಡಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಎಂ ಜಿ ನಾಯ್ಕ, ಕಾರ್ಯದರ್ಶಿಯಾದ ಅಣ್ಣಪ್ಪ ಮುಕ್ರಿ, ಸುಧೀರ ನಾಯ್ಕ, ಉಪಸ್ಥಿತರಿದ್ದರು.ನೌಕರ ಸಂಘದ ಪದಾಧಿಕಾರಿಗಳು , ನಿರ್ದೇಶಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು

error: