May 19, 2024

Bhavana Tv

Its Your Channel

ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರ ಚಾತುರ್ಮಾಸ ವ್ರತ ಆರಂಭ

ಹೊನ್ನಾವರ: ಶ್ರೀಕ್ಷೇತ್ರ ಬಂಗಾರಮಕ್ಕಿ ದೇವಸ್ಥಾನದ ಧರ್ಮಾಧಿಕಾರಿಗಳಾದ ಮರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಚಾತುರ್ಮಾಸ ವ್ರತವು ಆಷಾಢ ಶುದ್ಧ ಹುಣ್ಣಿಮೆ ದಿನಾಂಕ 13-07-2022 ರಂದು ವ್ಯಾಸಪೂಜೆ ಹಾಗೂ ಇನ್ನಿತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭಗೊAಡಿತು.

ಈ ವರ್ಷ ಲೋಕಕಲ್ಯಾಣಾರ್ಥದ ಮಹಾನ್ ಸಂಕಲ್ಪದೊAದಿಗೆ ಶ್ರೀದೇವರಲ್ಲಿ ಪ್ರಾರ್ಥಿಸಿ ವ್ರತ ಆರಂಭಿಸಿದರು. ಇಂತಹ ಪುಣ್ಯ ಪರ್ವದ ಶುಭಾವಸರದಲ್ಲಿ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಆಗಮಿಸಿ ಶ್ರೀ ಗುರೂಜಿಯವರ ದಿವ್ಯಾನುಗ್ರಹಕ್ಕೆ ಪಾತ್ರರಾದರು. ಅಂತೆಯೇ ಬೈಂದೂರು ಕ್ಷೇತ್ರದ ಶಾಸಕರಾದ ಸುಕುಮಾರ ಶೆಟ್ಟಿ ಇವರು ಆಗಮಿಸಿ ಶ್ರೀ ದೇವರ ದರ್ಶನ ಹಾಗೂ ಪೂಜ್ಯ ಗುರುಗಳ ಆಶೀರ್ವಾದ ಪಡೆದರು. ಅಪಾರ ಭಕ್ತ ಗಣ ಸಮೂಹ ನೆರೆದಿದ್ದು ಪೂಜ್ಯರ ಅನುಗ್ರಹ ಸಂದೇಶವನ್ನು ಪಡೆದು ಕೃತಾರ್ಥತೆಯನ್ನು ಪಡೆದರು.

error: