May 5, 2024

Bhavana Tv

Its Your Channel

ಶ್ರೀ ಮಹಾಸತಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಧರ್ಮಸ್ಥಳ ಸಂಘದಿoದ 1 ಲಕ್ಷ ರೂಪಾಯಿ ಡಿ.ಡಿ ಹಸ್ತಾಂತರ

ಹೊನ್ನಾವರ : ಕೆಳಗಿನ ಮೂಡ್ಕಣಿ ಶ್ರೀ ಮಹಾಸತಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದ ಬಗ್ಗೆ ಸ್ವಾಮೀಯ ಪ್ರಸಾದ ರೂಪವಾಗಿ 1 ಲಕ್ಷ ರೂಪಾಯಿ ಡಿ.ಡಿ ಯನ್ನು ಧರ್ಮಸ್ಥಳ ಸಂಘದ ಹೊನ್ನಾವರ ತಾಲೂಕಿನ
ಯೋಜನಾಧಿಕಾರಿಗಳಾದ ವಾಸಂತಿ ಆಮಿನ್ ಹಾಗೂ ಮೇಲ್ವಿಚಾರಕರಾದ ಶ್ರೀಕಾಂತ ನಾಯ್ಕ ರವರು ದೇವಸ್ಥಾನಕ್ಕೆ ಹಸ್ತಾಂತರಿಸಿದರು.

ಈ ದೇವಸ್ಥಾನ ಕಟ್ಟಡಕ್ಕೆ ಸಹಕಾರ ನೀಡಿದ ಧರ್ಮದರ್ಶಿಗಳಾದ ಶ್ರೀ ವೀರೇಂದ್ರ ಹೆಗಡೆ ಯವರಿಗೆ ಕಟ್ಟಡದ ಸಮಿತಿಯವರಿಂದ ಊರ ನಾಗರಿಕರಿಂದ ಅನಂತ ನಮನೆಗಳು ಸಲ್ಲಿಸಿದರು ಡಿ ಡಿ ತಲುಪಿಸಲು ಆಗಮಿಸಿದ ತಾಲೂಕಾ ಯೋಜನಾಧಿಕಾರಿಗಳಾದ ವಾಸಂತಿ ಆಮಿನ್ ರವರು ಗ್ರಾಮೀಣಾಭಿವೃದ್ದಿಯ ಕಿರುಪರಿಚಯವನ್ನು ಜನರೆದರು ವಿವರಿಸಿದರು .

ಬಡವರಿಗಾಗಿ ಕಷ್ಟದಲ್ಲಿರುವರಿಗೆ ಹಾಗೂ ಅಭಿವೃಧ್ದಿ ಪರ ಯಾವ ಯಾವ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದೆಂದು ವಿವರಿಸಿದರು. ಜೊತೆಯಲ್ಲಿ ಮೇಲ್ವಿಚಾರಕರಾದ ಶ್ರೀಕಾಂತ ನಾಯ್ಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಜಿ ಹೆಚ್ ನಾಯ್ಕ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು

error: