ಹೊನ್ನಾವರ : ಕೆಳಗಿನ ಮೂಡ್ಕಣಿ ಶ್ರೀ ಮಹಾಸತಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದ ಬಗ್ಗೆ ಸ್ವಾಮೀಯ ಪ್ರಸಾದ ರೂಪವಾಗಿ 1 ಲಕ್ಷ ರೂಪಾಯಿ ಡಿ.ಡಿ ಯನ್ನು ಧರ್ಮಸ್ಥಳ ಸಂಘದ ಹೊನ್ನಾವರ ತಾಲೂಕಿನ
ಯೋಜನಾಧಿಕಾರಿಗಳಾದ ವಾಸಂತಿ ಆಮಿನ್ ಹಾಗೂ ಮೇಲ್ವಿಚಾರಕರಾದ ಶ್ರೀಕಾಂತ ನಾಯ್ಕ ರವರು ದೇವಸ್ಥಾನಕ್ಕೆ ಹಸ್ತಾಂತರಿಸಿದರು.
ಈ ದೇವಸ್ಥಾನ ಕಟ್ಟಡಕ್ಕೆ ಸಹಕಾರ ನೀಡಿದ ಧರ್ಮದರ್ಶಿಗಳಾದ ಶ್ರೀ ವೀರೇಂದ್ರ ಹೆಗಡೆ ಯವರಿಗೆ ಕಟ್ಟಡದ ಸಮಿತಿಯವರಿಂದ ಊರ ನಾಗರಿಕರಿಂದ ಅನಂತ ನಮನೆಗಳು ಸಲ್ಲಿಸಿದರು ಡಿ ಡಿ ತಲುಪಿಸಲು ಆಗಮಿಸಿದ ತಾಲೂಕಾ ಯೋಜನಾಧಿಕಾರಿಗಳಾದ ವಾಸಂತಿ ಆಮಿನ್ ರವರು ಗ್ರಾಮೀಣಾಭಿವೃದ್ದಿಯ ಕಿರುಪರಿಚಯವನ್ನು ಜನರೆದರು ವಿವರಿಸಿದರು .
ಬಡವರಿಗಾಗಿ ಕಷ್ಟದಲ್ಲಿರುವರಿಗೆ ಹಾಗೂ ಅಭಿವೃಧ್ದಿ ಪರ ಯಾವ ಯಾವ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದೆಂದು ವಿವರಿಸಿದರು. ಜೊತೆಯಲ್ಲಿ ಮೇಲ್ವಿಚಾರಕರಾದ ಶ್ರೀಕಾಂತ ನಾಯ್ಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಜಿ ಹೆಚ್ ನಾಯ್ಕ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು
More Stories
ಖಾಸಗಿ ಬಸ್ ಪಲ್ಟಿಯಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ, ೨ ಸಾವು
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ