May 4, 2024

Bhavana Tv

Its Your Channel

ಹೊನ್ನಾವರ ಅರ್ಬನ್ ಬ್ಯಾಂಕ್ ಗಣನೀಯ ಸಾಧನೆ : ಸೆಪ್ಟೆಂಬರ್ 18ರಂದು ಮಹಾಸಭೆ

ಹೊನ್ನಾವರ:- ಗ್ರಾಹಕ ಸ್ನೇಹಿಯಾಗಿರುವಜಿಲ್ಲೆಯ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಹೊನ್ನಾವರಅರ್ಬನ್‌ಕೋ-ಒಪರೇಟಿವ್ ಬ್ಯಾಂಕ್ 2021-22ನೇ ಸಾಲಿನಲ್ಲಿ ರೂ.229.30 ಲಕ್ಷ ನಿರ್ವಹಣಾ ಲಾಭವನ್ನು ಗಳಿಸಿದ್ದು, ಸರಕಾರಕ್ಕೆಆದಾಯತೆರಿಗೆ ಪಾವತಿಸುವ ಬಗ್ಗೆ ಅನುವು ಮಾಡಿದ ನಂತರ ರೂ.151.87 ಲಕ್ಷ ನಿಕ್ಕಿ ಲಾಭ ಗಳಿಸಿದೆ. ತಾ: 18-09-2022, ರವಿವಾರ ಮುಂಜಾನೆ 10.00 ಗಂಟೆಗೆ ನ್ಯೂಇಂಗ್ಲೀಷ ಸ್ಕೂಲ್, ಹೊನ್ನಾವರ ಇದರ ಆವಾರದಲ್ಲಿ ಬ್ಯಾಂಕಿನ 103 ನೇ ವಾರ್ಷಿಕ ಮಹಾಸಭೆಜರುಗಲಿದೆ. ಎಲ್ಲಾ ಸದಸ್ಯರುಹಾಜರಿರಲು ಬ್ಯಾಂಕಿನಅಧ್ಯಕ್ಷರಾದ ಶ್ರೀ ರಾಘವ ವಿಷ್ಣು ಬಾಳೇರಿಯವರು ಕೋರಿದ್ದಾರೆ.
ಬ್ಯಾಂಕಿನಠೇವು ಸಂಗ್ರಹಣೆ ರೂ.209.50 ಕೋಟಿತಲುಪಿದ್ದು, ಸಾಲ-ಮುಂಗಡಗಳು ರೂ.131.51 ಕೋಟಿಗಳಿಗೆ ತಲುಪಿವೆ. ಶೇರು ಭಂಡವಾಳ ಮತ್ತು ಸ್ವಂತ ನಿಧಿಗಳು ರೂ.22.48 ಕೋಟಿಗಳಾಗಿದ್ದು, ಒಟ್ಟೂದುಡಿಯುವ ಭಂಡವಾಳ ರೂ.238.02 ಕೋಟಿಗಳಿಗೆ ಏರಿಕೆಯಾಗಿದೆ. ಒಟ್ಟೂ ರೂ.89.18 ಕೋಟಿ ಹಣವನ್ನು ಬ್ಯಾಂಕುಕೇAದ್ರ ಸರ್ಕಾರದ ಸಾಲಪತ್ರಗಳಲ್ಲಿ, ಓoಟಿ-Sಐಖಬೋಂಡ್‌ಗಳಲ್ಲಿ ಹಾಗೂ ವಿವಿಧ ಬ್ಯಾಂಕುಗಳಲ್ಲಿ ಗುಂತಾಯಿಸಿರುವದು ಬ್ಯಾಂಕಿನಆರ್ಥಿಕ ಸ್ಥಿರತೆಯನ್ನು ದೃಢೀಕರಿಸಿದೆ. ಬ್ಯಾಂಕು ಪ್ರಸಕ್ತ ಸಾಲಿನಲ್ಲಿ ರೂ.341.01 ಕೋಟಿಒಟ್ಟೂ ವ್ಯವಹಾರವನ್ನು ನಡೆಸಿದೆ. ಬ್ಯಾಂಕಿನಅಖAಖ ಭಾರತೀಯರಿಜರ್ವ ಬ್ಯಾಂಕ್ ಸೂಚಿಸಿರುವ 9% ಕ್ಕಿಂತ ಸಾಕಷ್ಟು ಹೆಚ್ಚು ಅಂದರೆ12.44ಇದ್ದು, ಇದು ಬ್ಯಾಂಕಿನಆರ್ಥಿಕ ಸುಭದ್ರತೆಯ ಸಂಕೇತವಾಗಿದೆ. ಒಟ್ಟೂ 24907 ಶೇರು ಸದಸ್ಯರನ್ನು ಹೊಂದಿರುವ ಬ್ಯಾಂಕು ರೂ.7.16 ಕೆÆÃಟಿಗಳಿಗÉ ಶÉÃರು ಭಂಡವಾಳ ವÀÀÈದ್ಧಿಸಿಕೊಂಡಿದೆ. ಬ್ಯಾಂಕು ಲೆಕ್ಕಪರಿಶೋಧನೆಯಲ್ಲಿ ‘ಅ’ ವರ್ಗದಲ್ಲಿ ಮುಂದುವರೆದಿದೆ. ವರದಿ ವರ್ಷದಲ್ಲಿ ಕೋವಿಡ್-19ರ ನಿಮಿತ್ತಗ್ರಾಹಕರ ವ್ಯವಹಾರಗಳು ಸಾಕಷ್ಟು ವ್ಯತ್ಯಯವಾದವು. ಆದಾಗ್ಯೂ ಬೇಂಕಿನ ಸಾಲ ವಸೂಲಾತಿ ಪ್ರಮಾಣ 97.11% ಇರುತ್ತದೆಎಂದು ತಿಳಿಸಲು ಹರ್ಷವೆನಿಸುತ್ತದೆಎಂತಅವರು ತಿಳಿಸಿದ್ದಾರೆ. ಬ್ಯಾಂಕು ಸಾಲ ಮತ್ತು ಮುಂಗಡಗಳನ್ನು ನೀಡಲು ಹೆಚ್ಚಿನ ಸಂಪನ್ಮೂಲವನ್ನು ಹೊಂದಿದ್ದು, ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಬ್ಯಾಂಕಿನ ಶರತ್ತುಗಳಿಗೆ ಒಳಪಟ್ಟು ಪ್ರತಿಗ್ರಾಂ ಬಂಗಾರಕ್ಕೆಗರಿಷ್ಠ ರೂ. 3,300/- ಬಂಗಾರದಾಗಿನೆ ಸಾಲವನ್ನು ಶೇ. 7.95 ರಿಂದ ಶೇ. 11 ರವರೆಗಿನ ಬಡ್ಡಿದರಗಳಲ್ಲಿ ನೀಡುತ್ತಿದೆ. ಇದರ ಹೊರತಾಗಿ ಬ್ಯಾಂಕಿನ ಶರತ್ತುಗಳಿಗೆ ಒಳಪಟ್ಟು ವಿಶೇಷ ಸಾಲ ಯೋಜನೆಗಳಾದ ಕಾರು ಸಾಲ 7.15% ಹಾಗೂ ವ್ಯವಹಾರ ಉದ್ದಿಮೆಗಳಿಗೆ 9.25% ರ ಬಡ್ಡಿದರಗಳಲ್ಲಿ ಸಾಲವನ್ನು ನೀಡಲಾಗುತ್ತಿವೆ.
ಬ್ಯಾಂಕು ಕೋರ್ ಬ್ಯಾಂಕಿAಗ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬ್ಯಾಂಕಿನ ಗ್ರಾಹಕರಿಗೆ ತಂತ್ರಜ್ಞಾನ ಪೂರಿತ ಅತ್ಯಾಧುನಿಕ ಬ್ಯಾಂಕಿAಗ್ ಸೌಲಭ್ಯಗಳನ್ನು ನೀಡುತ್ತಿದೆ. ತನ್ಮೂಲಕ ಎಲ್ಲಾ ಶಾಖೆಗಳಲ್ಲಿ ಆರ್.ಟಿ.ಜಿ.ಎಸ್./ನೆಫ್ಟ್, ಸಿ.ಟಿ.ಎಸ್.ಕ್ಲಿಯರಿಂಗ್, ಎಸ್.ಎಂ.ಎಸ್. ಅಲರ್ಟ್ ಸರ್ವೀಸ್, ರುಪೇಕಾರ್ಡ್, ಇ-ಸ್ಟಾಂಪಿAಗ್ ಮುಂತಾದ ನವೀನ ಗ್ರಾಹಕ ಸ್ನೇಹಿ ಸೌಲಭ್ಯಗಳನ್ನು ಪ್ರಚುರಪಡಿಸಿದೆ. ಬ್ಯಾಂಕುಸ್ವAತಎ.ಟಿ.ಎಮ್. ಹೊಂದಿದೆ. ಹಾಗೂ ಬ್ಯಾಂಕುಡಿಜಿಟಲ್ ಬ್ಯಾಂಕಿAಗ್ ಹಾಗೂ ಇ-ಪೇಮೆಂಟ್‌ಗಳಿಗೆ ಹೆಚ್ಚಿನಒತ್ತು ನೀಡುತ್ತಿದೆ. ಮೊಬೈಲ್ ಬ್ಯಾಂಕಿAಗ್ ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿಇದೆ.
ಬ್ಯಾಂಕು ಸಮಾಜಮುಖಿಯಾಗಿ ತನ್ನ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಶಿಕ್ಷಣ, ಕ್ರೀಡೆ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ಜಿಲ್ಲೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಪರಿಪಾಠ ಹಾಕಿಕೊಂಡಿದೆ. ವಿಕಲಚೇತನ ವಿದ್ಯಾರ್ಥಿಗಳನ್ನು ಸಹ ಪ್ರೋತ್ಸಾಹಿಸಿದೆ. ಬ್ಯಾಂಕು ತನ್ನ ಸಂಸ್ಥಾಪಕರಾದ ದಿ. ಎಮ್. ಎ. ಕಿಣಿ ಹಾಗೂ ದಿ. ಎಲ್. ಕೆ. ಶ್ಯಾನಭಾಗ ಶ್ರೋಫ್‌ರವರ ಸ್ಮರಣಾರ್ಥ ನಿರ್ಮಿಸಿರುವ ಸಭಾಭವನವನ್ನು ಸಹಕಾರಿ ವಲಯದತರಬೇತಿ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಬ್ಯಾಂಕು ಅಗತ್ಯವುಳ್ಳವರಿಗೆ ಸಹಾಯ ಮಾಡಿದೆ. ದೇಶದ ಸ್ವಾತಂತ್ರö್ಯದಅಮೃತ ಮಹೋತ್ಸವದ ಪ್ರಯುಕ್ತಬ್ಯಾಂಕುನ್ಯೂಇAಗ್ಲೀಷ ಸ್ಕೂಲ್, ಹೊನ್ನಾವರದಆವಾರದಲ್ಲಿ ವನಮಹೋತ್ಸವಕಾರ್ಯಕ್ರಮ ಹಮ್ಮಿಕೊಂಡಿತ್ತುಎAತ ಬ್ಯಾಂಕಿನಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: