ಹೊನ್ನಾವರ: ಕಾಸರಕೊಡ ಒಳಮಾರ್ಗವಾಗಿ 9.15 ಕ್ಕೇ ಹೋಗುವ ಮಾಳ್ಕೋಡ್ ಬಸ್ಸು 3-4 ದಿನದಿಂದ ಹೋಗುತ್ತಿರಲಿಲ್ಲ, ಆದ ಕಾರಣ ಕಾಸಕೋಡ ಮಲಬಾರಕೇರಿ ಕಳಸನಮೋಟೆ ವಿದ್ಯಾರ್ಥಿಗಳಿಗೆ ಬಸ್ಸು ಸಿಗದೆ ರಿಕ್ಷಾಗೆ ದುಡ್ಡು ಕೊಟ್ಟು ಹೋಗುವ ಪರಿಸ್ಥಿತಿ ಬಂದಿತು ಮತ್ತು ಸರಿಯಾದ ಸಮಯದಲ್ಲಿ ಕ್ಲಾಸ್ ಗೆ ಹೋಗಲು ಆಗುತ್ತಿರಲಿಲ್ಲ…. ಇದರಿಂದ ನೊಂದ ವಿದ್ಯಾರ್ಥಿಗಳು ಒಟ್ಟಾಗಿ ಬಸ್ಸನ್ನು ಅಪ್ಸರಕೊಂಡ ಕ್ರಾಸ ನಲ್ಲಿ ಅಡ್ಡ ಹಾಕಲಾಯಿತು…. ಕಡೆಗೆ ಅಂತೂ ವಿದ್ಯಾರ್ಥಿಗಳ ಮತ್ತು ಕರವೇ ಸಂಘಟನೆ ಹೋರಾಟದಿಂದ ಬಸ್ಸು ಹಿಂದಿರುಗಿಸಿ ಕಾಸರಕೊಡ ಒಳಮಾರ್ಗವಾಗಿ ಹೊನ್ನಾವರಕ್ಕೆ ಹೋಯಿತು…. ಹೋರಾಟಕ್ಕೆ ಬೆಂಬಲ ಕೊಟ್ಟ ಕರವೇ ಸಂಘಟನೆಗೆ ವಿದ್ಯಾರ್ಥಿಗಳು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು, ಈ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಕರವೇ ಅಧ್ಯಕ್ಷ ಮಂಜುನಾಥ್ ಗೌಡರವರು ಸರಕಾರಿ ಬಸ್ ಮೇಲೆ ಹಾಕಿನ ಗುಟ್ಕಾ ಜಾಹಿರಾತನ್ನು ತೆರವುಗೊಳಿಸುವ ಬಗ್ಗೆ ಹೇಳಿಕೆ ನೀಡಿದ್ದು ಈ ಜಾಹಿರಾತಿನಿಂದ ವಿದ್ಯಾರ್ಥಿಗಳು ತಪ್ಪು ದಾರಿ ಹಿಡಿಯುತ್ತಾರೆ ಇಂತ ಜಾಹಿರಾತನ್ನು ತೆರವುಗೊಳಿಸಿ ಎಂದು ಹೇಳಿದರು, ಈ ಸಂದರ್ಬದಲ್ಲಿ ಯುವ ಘಟಕದ ಕಾರ್ಯದರ್ಶಿ ಶ್ರೀಪಾದ್ ಗೌಡ ಮತ್ತು ಸುಬ್ರಾಯ ಗೌಡ ಹಲವಾರು ವಿದ್ಯಾರ್ಥಿಗಳು ರಿಕ್ಷಾ ಚಾಲಕರು ಇದ್ದರು.
More Stories
ಖಾಸಗಿ ಬಸ್ ಪಲ್ಟಿಯಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ, ೨ ಸಾವು
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ