May 19, 2024

Bhavana Tv

Its Your Channel

ಸೆ.25 ಕ್ಕೆ ಪಾರ್ತಿಸುಬ್ಬ ವಿರಚಿತ “ಪಂಚವಟಿ” ತಾಳಮದ್ದಳೆ

ಹೊನ್ನಾವರ:- ಯಕ್ಷಲೋಕ (ಅ) ಹಳದೀಪುರ, ಸ್ಫೂರ್ತಿ ರಂಗ, ಹೊನ್ನಾವರ ಮತ್ತು ಶ್ರೀ ಮುರ್ಡೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಮುರ್ಡೇಶ್ವರ ಹಾಗೂ ಅತಿಥಿ ಕಲಾವಿದರಿಂದ ಇವರೆಲ್ಲರ ಸಂಯುಕ್ತ ಆಶ್ರಯದಲ್ಲಿ ಹೊನ್ನಾವರದಲ್ಲಿ ದಿ. ಉದಯ ನಾಯ್ಕ, ಮೂಡ್ಕಣಿ ಇವರಿಗೆ ಶ್ರದ್ದಾಂಜಲಿ’ ಮತ್ತು ಪಾರ್ತಿಸುಬ್ಬ ವಿರಚಿತ “ಪಂಚವಟಿ” ತಾಳಮದ್ದಳೆ ಯು ದಿನಾಂಕ : 25-09-2022 ರಂದು (ರವಿವಾರ) ಹಗಲು 3-30 ರಿಂದ ಸಂಜೆ 7-00 ರವರೆಗೆ : ಸ್ಫೂರ್ತಿರಂಗ ಕಾರ್ಯಾಲಯ, ‘ನಮ್ಮನೆ’ ಫಾರೆಸ್ಟ್ ಕಾಲೊನಿ, ಪ್ರಭಾತನಗರದಲ್ಲಿ ನಡೆಯಲಿದೆ

ಹಿಮ್ಮೇಳ ದಲ್ಲಿ ಭಾಗವತರಾಗಿ : ಕಡತೋಕಾ ಗೋಪಾಲಕೃಷ್ಣ ಭಾಗವತ, ಹಳದೀಪುರ, ಗಣೇಶ ಯಾಜಿ, ಮಾವಿನಕೆರೆ, ಇಡಗುಂಜಿ, ಮದ್ದಳೆ ಮತ್ತು ಚಂಡೆ : ಶ್ರೀಪಾದ ಭಟ್ಟ ಕಡತೋಕಾ, ಪಿ.ಕೆ. ಹೆಗಡೆ ಹರಿಕೇರಿ ಮತ್ತು ಕುಮಾರ ಮಯೂರ ಹರಿಕೇರಿ
ಪಾತ್ರಧಾರಿಗಳು :ಶ್ರೀರಾಮ – ರಾಘವೇಂದ್ರ ಗಾಯತೊಂಡೆ, ಲಕ್ಷö್ಮಣ ಮಹಾಬಲೇಶ್ವರ ಭಂಡಾರಿ, ಘೋರ ಶೂರ್ಪನಖಿ ಗಣಪತಿ ಕಾಯ್ಕಿಣಿ. ಮಾಯಾ ಶೂರ್ಪನಖಿ : ಕೃಷ್ಣ ಹೆಗಡೆ , ಸೀತೆ – ರಕ್ಷಿತ್ ನಾಯ್ಕ ಕುಳಿಮನೆ. ಬ್ರಾಹ್ಮಣರು : ರಾಜೇಶ ಶೆಟ್ಟಿ, ಬಸ್ತಿ, ಮತ್ತು ಶ್ರೀ ಮಂಗೇಶ ಗಾಯತೊಂಡೆ ವಹಿಸಲಿದ್ದಾರೆ.

ಯಕ್ಷಗಾನ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಾಳಮದ್ದಳೆ ವೀಕ್ಷಿಸಬೇಕೆಂದು ಕಡತೋಕಾ ಶ್ರೀ ಗೋಪಾಲಕೃಷ್ಣ ಭಾಗವತ ಮತ್ತು ಡಾ.ಎಸ್. ಡಿ. ಹೆಗಡೆ, “ಯಕ್ಷರಂಗ” ಮಾಸಪತ್ರಿಕೆ, ಸ್ಪೂರ್ತಿ ರಂಗ” ಹೊನ್ನಾವರ ಶ್ರೀ ಮುರ್ಡೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಮುರ್ಡೇಶ್ವರ.ಇವುಗಳ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ತಿಳಿಸಿದ್ದಾರೆ

error: