April 26, 2024

Bhavana Tv

Its Your Channel

ನವೆಂಬರ್ 13 ಕ್ಕೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹೊನ್ನಾವರ :- ನವೆಂಬರ್ 13 ಭಾನುವಾರ ಬೆಳಿಗ್ಗೆ 9.00 ಕ್ಕೆ ಹೊನ್ನಾವರ ತಾಲೂಕಿನ ಕಾಸರಕೋಡಿನ ಸ್ನೇಹಕುಂಜದ ವಿವೇಕಾನಂದ ಆರೋಗ್ಯ ಧಾಮದಲ್ಲಿ ಮಂಗಳೂರಿನ ಎಜೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ನುರಿತ ತಜ್ಷ ವೈದ್ಯರ ತಂಡದಿAದ, ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ

ರಾಷ್ಟಿçÃಯ ಮೀನುಗಾರರ ಸಂಘಟನೆ ಹಾಗೂ ಅಳ್ಳಂಕಿಯ ಸ್ಪಂದನ ಸಮಾಜ ಸೇವಾ ಬಳಗ , ಕಾಸರಕೋಡಿನ ಕರಾವಳಿ ಮೀನುಗಾರರ ಕಾರ್ಮೀಕರ ಮತ್ತು ಪರ್ಸೀನ ಬೋಟ ಮಾಲಕರ ಸಂಘದ ನೇತ್ರತ್ವ ಹಾಗೂ ಕಾಸರಕೋಡ ಗ್ರಾಮ ಪಂಚಾಯತ ಮತ್ತು ವಿವಿಧ ಸ್ಥಳೀಯ ಮೀನುಗಾರ ಸಂಘಟನೆಗಳ, ಇನ್‌ವಾಯಸ್, ಟ್ಯಾಗ್‌ಸ್ಕಿಲ್ ಮುಂತಾದವರ ಸಹಯೋಗದಲ್ಲಿ ನವೆಂಬರ್ 13 ಭಾನುವಾರ ಬೆಳಿಗ್ಗೆ 9.00 ಕ್ಕೆ ತಾಲೂಕಿನ ಕಾಸರಕೋಡಿನ ಸ್ನೇಹಕುಂಜದ ವಿವೇಕಾನಂದ ಆರೋಗ್ಯ ಧಾಮದಲ್ಲಿ ಮಂಗಳೂರಿನ ಎಜೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ನುರಿತ ತಜ್ಷ ವೈದ್ಯರ ತಂಡದಿAದ, ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ * ಸಾಮಾನ್ಯ ಆರೋಗ್ಯ ತಪಾಸಣೆ, * ಮಕ್ಕಳ ಆರೋಗ್ಯ ತಪಾಸಣೆ, ಹೃದಯ ಸಂಬAಧಿ ಕಾಯಿಲೆ ತಪಾಸಣೆ * ಕಣ್ಣಿನ ತಪಾಸಣೆ, * ದಂತ ತಪಾಸಣೆ ಮತ್ತು ಚಿಕಿತ್ಸೆ, * ಸಂದು ವಾತ-ಎಲುಬು ಮತ್ತು ಕೀಲುರೋಗ, ಚರ್ಮ ರೋಗ, * ಕಿವಿ ಮೂಗು ಮತ್ತು ಗಂಟಲು ತಪಾಸಣೆ, * ಮೂತ್ರಾಂಗ ರೋಗ ತಪಾಸಣೆಗೆ ಅವಕಾಶವಿರುತ್ತದೆ. *ಶಿಬಿರದಲ್ಲಿ ಇಸಿಜಿ ಮತ್ತು ಮಧುಮೇಹ/ಸಕ್ಕರೆ ಕಾಯಿಲೆ ಪರೀಕ್ಷೆ, ಮತ್ತು ಔಷಧಿ ಉಚಿತವಾಗಿರುತ್ತದೆ. ಅಗತ್ಯ ಇರುವ ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕವನ್ನು ಸಹ ವಿತರಿಸಲಾಗುವುದು. ಸಾರ್ವಜನಿಕರು ಈ ಶಿಬಿರದ ಲಾಭ ಪಡೆದುಕೊಳ್ಳಬೇಕೆಂದು ಸ್ಪಂದನ ಸಮಾಜ ಸೇವಾ ಬಳಗದ ಅಧ್ಯಕ್ಷ ಚಂದ್ರಕಾAತ ಕೊಚರೇಕರ, ಕಾಸರಕೋಡ ಗ್ರಾಮ ಪಂಚಾಯತ ಅಧ್ಯಕ್ಷ ಮಂಜು ಗೌಡ, ಸ್ಥಳೀಯ ಮೀನುಗಾರ ಸಂಘಟನೆಗಳ ರಾಜೇಶ ತಾಂಡೇಲ, ಹಮಜಾ ಪಟೇಲ, ಗಣಪತಿ ತಾಂಡೇಲ, ಪ್ರೀತಿ ತಾಂಡೇಲ, ಜಗದಿಶ ತಾಂಡೇಲ ಇನ್ನೂ ಮುಂತಾದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: