ಹೊನ್ನಾವರ ತಾಲೂಕಿನ ಸರಳಗಿಯಲ್ಲಿ ಸ್ಥಳೀಯ “ರಾಣಿ ಚೆನ್ನಭೈರಾದೇವಿ ಯುವಕ ಸಂಘ”ದವರ ಆಶ್ರಯದಲ್ಲಿ ಆಯೋಜನೆಗೊಂಡ ವಾಲಿಬಾಲ್ ಪಂದ್ಯಾವಳಿಯ ಪ್ರಯುಕ್ತ, “ಸ್ವರಸಾಗರ ಮೆಲೋಡಿಸ್ ಕುಮಟಾ”ದವರಿಂದ ಅದ್ದೂರಿಯಾಗಿ ರಸಮಂಜರಿ ಕಾರ್ಯಕ್ರಮ ನಡೆಯಿತು.
ವಿವಿಧ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು.
ಬಳಿಕ ಸಿರಿನೆಲ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ್ ಮಹಾಲೆ ಸಾರಥ್ಯದ “ಸ್ವರ ಸಾಗರ ಮೆಲೋಡಿಸ್ ಕುಮಟಾ” ದವರು ನಡೆಸಿಕೊಟ್ಟ “ಸಂಗೀತ ರಸಮಂಜರಿ” ಕಾರ್ಯಕ್ರಮವು ನೆರೆದಿದ್ದ ಕಲಾಭಿಮಾನಿಗಳ ಮೆಚ್ಚುಗೆಗೆ ಸಾಕ್ಷಿಯಾಯಿತು.
ರಾಜ್ಯ ಪ್ರಶಸ್ತಿ ಪುರಸ್ಕೃತ ಕೂಜಳ್ಳಿ ಮಾರುತಿ ನಾಯ್ಕ್ ಹೆಣ್ಣು ಮತ್ತು ಗಂಡು ಧ್ವನಿಯಲ್ಲಿ ಹಾಡಿ ಕಲಾಭಿಮಾನಿಗಳನ್ನು ರಂಜಿಸಿದರು. ನಟಸರ್ವಭೌಮ ಡಾಕ್ಟರ್ ರಾಜಕುಮಾರ್ ಧ್ವನಿಯಂತೆ ಹೋಲುವ ಪ್ರಶಾಂತ್ ಗಾವಡಿ ಗಾಯನಕ್ಕೆ ಪ್ರೇಕ್ಷಕರು ಕುಣಿದು ಸಂಭ್ರಮಿಸಿದರು. ಕುಮಾರಿ ಯಶೋಧ ಹಾಗೂ ತನುಜಾ ಸುಮಧುರವಾಗಿ ಹಾಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಸಾಕ್ಷಿಯಾದರು.
ಇವರಿಗೆಲ್ಲ ಪೂರಕವಾಗಿ ವಿಜಯ್ ಮಹಾಲೆ ಕೀಬೋರ್ಡ್, ಪ್ರದೀಪ್ ಭಂಡಾರಿ ತಬಲಾ, ಹಾಗೂ ವಿ.ಟಿ. ಭಟ್ ರಿದಮ್ ಪ್ಯಾಡ್ ನಲ್ಲಿ ಸಾಥ್ ನೀಡುವ ಮೂಲಕ ರಸಮಂಜರಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು. ಅನ್ನ ನೀಡುವ ನೇಗಿಲಯೋಗಿ, ದೇಶ ಕಾಯುವ ವೀರಯೋಧರನೆಲ್ಲ ಸ್ಮರಿಸುವ ಮೂಲಕ ದಿವ್ಯಾ ಕಲಸಂಕ ಆಕರ್ಷಕವಾಗಿ ನಿರೂಪಣೆ ಮಾಡಿದರು.
ರಸಮಂಜರಿ ಕಾರ್ಯಕ್ರಮದ ಬಳಿಕ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಿತು.
ವರದಿ: ನರಸಿಂಹ ನಾಯ್ಕ್ ಹರಡಸೆ.
More Stories
ವಿದ್ಯುತ್ ಲೈನ್ ಕಿಡಿಯಿಂದ ತಗುಲಿದ ಬೆಂಕಿ ತೋಟಕ್ಕೂ ವ್ಯಾಪಿಸಿ ಹಾನಿ
ಖಾಸಗಿ ಬಸ್ ಪಲ್ಟಿಯಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ, ೨ ಸಾವು
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.