May 17, 2024

Bhavana Tv

Its Your Channel

ಜನಪರ ವೇದಿಕೆಯ ವತಿಯಿಂದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕುಟುಂಬಕ್ಕೆ ಆರ್ಥಿಕವಾಗಿ ನೆರವು

ಹೊನ್ನಾವರ ತಾಲೂಕಿನ ಅರೇಅಂಗಡಿಯ ಗುರು ಮಂಜು ಜೋಗಿ ಇವರು ರಸ್ತೆ ಅಪಘಾತದಲ್ಲಿ ಕೈ ಭಾಗಕ್ಕೆ ಗಂಭೀರ ಗಾಯಗೊಂಡಿದ್ದರು. ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿರುದನ್ನು ಮನಗಂಡು ಜನಪರ ವೇದಿಕೆಯ ವತಿಯಿಂದ ಆರ್ಥಿಕವಾಗಿ ನೆರವು ನೀಡಿದರು.
ಈ ವೇಳೆ ಜನಪರ ವೇದಿಕೆಯ ಸಂಘಟಕರಾದ ಎಂ.ಜಿ.ಭಟ್ ಮಾತನಾಡಿ ಆಸ್ಪತ್ರೆಯ ಚಿಕಿತ್ಸೆಗೆ ನೆರವಾಗಲು ಜನಪರ ವೇದಿಕೆಯು ನೆರವಾಗಿದೆ. ಮೈಸೂರಿನಲ್ಲಿ ಆಪರೇಷನ್ ನಡೆಯಬೇಕಿದ್ದು, ಒಂದು ಲಕ್ಷದಷ್ಟು ಹಣದ ಅವಶ್ಯವಿದೆ. ಸಹೃದಯಿ ದಾನಿಗಳು ಆರ್ಥಿಕವಾಗಿ ನೆರವಾಗುವಂತೆ ಮನವಿ ಮಾಡಿದರು.
ಈ ವೇಳೆ ಗ್ರಾ.ಪಂ.ಸದಸ್ಯ ಗಣಪತಿ ಭಟ್, ಶ್ರೀಧರ ಹೆಗಡೆ, ರವಿ ನಾಯ್ಕ, ದಿನೇಶ ಹೆಗಡೆ ಮಣಿಕಂಠ ಶೆಟ್ಟಿ, ನಾರಾಯಣ ಹೆಗಡೆ ವಿ.ಪ್ರಸನ್ನ, ಸಂಜೀವ ಶೆಟ್ಟಿ, ಉದಯ ಭಟ್ ಮತ್ತಿತರರು ಉಪಸ್ಥಿತರಿದ್ದರು.

error: