April 27, 2024

Bhavana Tv

Its Your Channel

ಅಕ್ರಮ ಮರಳು ಅಡ್ಡೆಯ ಮೇಲೆ ಸಿಪಿಐ ಮಂಜುನಾಥ ಇ.ಓ ನೇತ್ರತ್ವದಲ್ಲಿ ದಾಳಿ

ಹೊನ್ನಾವರ ತಾಲೂಕಿನ ಕಾಸರಕೋಡ ಗ್ರಾಮದ ತೊಪ್ಪಲ ಮತ್ತು ಕಳಸಿನಮೊಟ್ಟೆ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಸರಿಸುಮಾರು 12 ಲೋಡ್ ಮರಳನ್ನು ಜಪ್ತುಪಡಿಸಿಕೊಂಡ ಘಟನೆ ರವಿವಾರ ಸಾಯಂಕಾಲ ಸಂಭವಿಸಿದೆ.
ಅಕ್ರಮ ಮರಳುಸಾಗಣಿ ತಾಲೂಕಿನಿಂದ ಜಿಲ್ಲೆಯ ವಿವಿಧಡೆ ಸಾಗಿಸಲಾಗುತ್ತಿದೆ ಎನ್ನುವ ಆರೋಪವಿತ್ತು. ಇದರ ಬೆನ್ನಲೆ ಇದೀಗ ಅಧಿಕಾರಿಗಳು ಅಕ್ರಮ ಸಾಗಟ ತಡೆಯಲು ಕಾರ್ಯಪ್ರವೃತ್ತರಾಗಿದ್ದು ಸಿ.ಪಿ.ಐ ಮಂಜುನಾಥ ಇ.ಓ ನೇತ್ರತ್ವದಲ್ಲಿ ದಾಳಿ ನಡೆದಿದ್ದು ಅಕ್ರಮ ಮರಳು ಸಾಗಾಟ ಮಾಡುವರಿಗೆ ಶಾಕ್ ನೀಡಿದಂತಾಗಿದೆ. ಈ ವೇಳೆ ಪೊಲೀಸ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

error: