May 2, 2024

Bhavana Tv

Its Your Channel

ರಸ್ತೆ ಹಾಗೂ ಮೂಲ ಸೌಕರ್ಯವನ್ನು ಒದಗಿಸುವಂತೆ ಪುರಸಭೆಯ 10 & 11 ನೇ ವಾರ್ಡಿನ ನಾಗರಿಕರಿಂದ ರಸ್ತೆಯ ನಡುವೆ ಗಿಡಗಳನ್ನು ನೆಟ್ಟು ಪ್ರತಿಭಟನೆ

ಭಟ್ಕಳ ನಗರ ಪ್ರದೇಶದ ಜಂಬರ್ ಮಠಕ್ಕೆ ಸಾಗುವ ಮಾರ್ಗದ ವಾರ್ಡನಂಬರ್ 10 ಮತ್ತು 11 ರ ರಸ್ತೆ ಸೇರಿದಂತೆ ಇತರೇ ಮೂಲ ಸೌಕರ್ಯಗಳನ್ನು ಪಡೆಯಲು ನಾಗರಿಕರು ಹರಸಾಹಸ ಪಡೆಬೇಕಾದಂತಹ ಪರಿಸ್ಥಿತಿ ಬಂದೊಗಿದೆ. ಇಲ್ಲಿನ ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಇಲ್ಲಿನ ಸ್ಥಳಿಯ ನಿವಾಸಿಗಳು ಈ ಬಗ್ಗೆ ಎಷ್ಟೇ ಬಾರಿ ಈ ಬಗ್ಗೆ ಮನವಿಯನ್ನು ನೀಡಿದರು ಪುರಸಭೆ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹಲವಾರು ಬಾರಿ ಸ್ಥಳಿಯಾಡಳಿತ ಹಾಗೂ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಲಾದರೂ ಪ್ರಯೋಜನ ವಾಗಿಲ್ಲ , ಅಧಿಕಾರಿಗಳು ಈ ಬಗ್ಗೆ ಗಮನಹರಿಸದಿರುವುದು ಇಲ್ಲಿನ ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ವಾರ್ಡ ಸಂಬರ್ 10 ಮತ್ತು 11ರ ಸತಳಿಯರು ಈ ಅವ್ಯವಸ್ಥೆಯಿಂದ ಬೇಸತ್ತು ರಸ್ತೆಯಲ್ಲಿರುವ ಹೊಂಡಗಳಲ್ಲಿ ಗಿಡಗಳನ್ನು ನೆಟ್ಟು ಸಾಂಕೇತಿಕವಾಗಿ ಪ್ರತಿಭಟಿಸಿದರು.

ಈ ಬಗ್ಗೆ ವಾಹಿನಿಯೊಂದಿಗೆ ಸ್ಥಳಿಯರಾದ ಸಚಿನ್ ಮಹಾಲೆ ಮಾತನಾಡಿ ಜನರು ನಿತ್ಯ ಸಂಚಾರಕ್ಕೆ ಅನೂಕೂಲ ಕಲ್ಪಿಸುವ ರಸ್ತೆಯು ಕಳೆದ 5 -6 ವರ್ಷಗಳಿಂದ ಹಾಳಾಗಿದ್ದು ಈ ಬಗ್ಗೆ ನಗರೋತ್ಥಾನ ಯೊಜನೆಯಡಿ ಕಳೆದ 2 ತಿಂಗಳ ಹಿಂದೆ ಭೂಮಿ ಪೂಜೆ ಜರುಗಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕುಂದಾಪುರ ಮೂಲದ ಗುತ್ತಿಗೆದಾರು ಕಾಮಗಾರಿ ಟೆಂಡರ್ ಪಡೆದು ಕಾಮಗಾರಿ ಆರಂಭಿಸಲು ಮೀನ ಮೇಷ ಎಣಿಸುತ್ತಿದ್ದು ಈ ಬಗ್ಗೆ ಪುರಸಭೆಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಗುತ್ತಿಗೆದಾರನಿಗೆ ಈ ಬಗ್ಗೆ ಪುರಸಭೆ ನೋಟಿಸ್ ನೀಡಿದ್ದರು ಕಾಮಗಾರಿ ಆರಂಭಿಸಿಲ್ಲ. ಸ್ಥಳಿಯರು ಗುತ್ತಿಗೆದಾರನನ್ನು ಪೋನ್ ಮೂಲಕ ಸಂಪರ್ಕಿಸಲು ಪ್ರಯತ್ತಿಸಿದರು ಗುತ್ತಿಗೆದಾರನಿಂದ ಯಾವುದೇ ರೀತಿಯ ಸಮರ್ಪಕವಾದಂತಹ ಉತ್ತರ ದೊರೆಯದಾಗಿದೆ.

ಈ ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದು, ಕಬ್ಬಿಣದ ಸರಳುಗಳು ರಸ್ತೆಯಲ್ಲಿ ಎದ್ದು ನಿಂತಿದ್ದು ಇದರಿಂದ ವಾಹನ ಸವಾರರು ಗಾಡಿಗಳನ್ನು ಚಲಾಯಿಸುವುದು ಕಷ್ಟ ಎಂಬAತಾಗಿದೆ. ಅಲ್ಲದೆ ನೀರಿನ ಬಾವಿಗಳು ಅವೈಜ್ಣಾನಿಕವಾಗಿ ನಿರ್ಮಾಣಗೊಂಡ ಯುಜಿಡಿ ಅಂಡರ್ ಗ್ರೌಂಡ್ ಡ್ರಾಯನೇಜ್ ಕಾಮಗಾರಿಯಿಂದಾಗಿ ಈ ಭಾಗದ ಹಲವು ಮನೆಗಳು ನೀರಿನ ಸಮಸ್ಯೆಯನ್ನು ಎದರಿಸುತ್ತಿದ್ದಾರೆ. ರಥೋತ್ಸವದ ಸಮಯದಲ್ಲಿ ದೇವರ ಪಲ್ಲಕ್ಕಿ ಉತ್ಸವವು ಈ ಮಾರ್ಗದಿಂದಲೇ ಸಂಚರಿಸುವುದಿದ್ದು. ಈ ಬಗ್ಗೆ ಪುರಸಭೆಯಾದರೂ ಗಮನಹರಿಸಿ ಶೀಘ್ರವಾಘಿ ಕಾಮಗಾರಿಯನ್ನು ನಡೆಸಿ ನಾಗರಿಕರಿಗೆ ಮೂಲ ಸೌಕರ್ಯಗಳನ್ನು ಆದಷ್ಟು ಶೀಘ್ರದಲ್ಲಿ ಒದಗಿಸುವಲ್ಲಿ ಪ್ರಮಾಣಿಕವಾದ ಪ್ರಯತ್ನ ನಡೆಸಲಿ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳ ವರೆಗೂ ಇ ಬಗ್ಗೆ ಮಾಹಿತಿ ಸಲ್ಲಿಸಲಾಗಿದದು ಇಲ್ಲಿಯ ತನಕ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಇಂದು ಸಾಂಕೆತಿಕವಾಗಿ ಹೊರಾಟ ಮಾಡಿದ್ದು ಮುಂದಿನದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೊಟಾಟ ನಡೆಸುವ ಬಗ್ಗೆ ಎಚ್ಚರಿಕೆಯನ್ನು ನೀಡಿದರು

ಈ ಸಂಧರ್ಭದಲ್ಲಿ ವಿನಾಯಕ್ ಶೇಟ್, ಶ್ರೀಕಾಂತ ಮೋಗೇರ , ಅಮಿತ ಮಹಾಲೆ,,ವಿಶ್ವನಾಥ ಶೇಟ್, ಸೇರಿದಂತೆ ಸ್ಥಳಿಯರು ಉಪಸ್ಥಿತರಿದ್ದರು.

error: