ಹೊನ್ನಾವರ ; ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಹೊನ್ನಾವರ ಹಾಗೂ ತಾಲೂಕಾ ಸ್ವೀಪ್ ಸಮಿತಿ ಹೊನ್ನಾವರ ಇವರ ಸಹಯೋಗದಲ್ಲಿ ಮತದಾನದ ಜಾಗೃತಿಯ ಕುರಿತು ಬೈಕ್ ರ್ಯಾಲಿ ನಡೆಯಿತು. ನಗರದ ಹಲವು ಬೀದಿಗಳಲ್ಲಿ ಜಾಥಾವು ತೆರಳಿ ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಬೇಕೆಂದು ಸಾರ್ವಜನಿಕರಿಗೆ ಜಾಗೃತಿ ಮಾಡಲಾಯಿತು. ಈ ಬೈಕ್ ರ್ಯಾಲಿಯನ್ನು ತಾಲೂಕಾ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳಾದ ರವಿರಾಜ ದೀಕ್ಷಿತ ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಸುರೇಶ ನಾಯ್ಕರವರು ಹಸಿರು ಬಾವುಟವನ್ನು ತೋರಿಸಿ ಚಾಲನೆಯನ್ನು ನೀಡಿದರು.
ಬೈಕ್ ರ್ಯಾಲಿಯು ವಿವಿಧ ಘೋಷಣೆಗಳನ್ನು ಹೇಳುತ್ತಾ ತಾಲೂಕಾ ಪಂಚಾಯತದಿAದ ಆರಂಭಗೊ0ಡು ಭಟ್ಕಳ್ ಸರ್ಕಲ್ ದಾಟಿ ತಾಲೂಕಾ ಆಸ್ಪತ್ರೆಯ ಎದುರಿನಿಂದ ಬಸ್ ಸ್ಟ್ಯಾಂಡ್ ಎದುರುಗಡೆ ಮುಂದುವರೆದು, ಬಂದರ್ ರಸ್ತೆಯ ಮೂಲಕ ಸಾಗಿ ಶ್ರೀದೇವಿ ಆಸ್ಪತ್ರೆಯ ರಸ್ತೆಯಿಂದ ಮುಂದುವರೆದು ಪುನಃ ತಾಲೂಕಾ ಪಂಚಾಯತ ಆವರಣಕ್ಕೆ ಬಂದಿತು.
ಈ ಜಾಗೃತಿ ರ್ಯಾಲಿಯಲ್ಲಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಕೃಷಿ ಅಧಿಕಾರಿ ಪುನೀತಾ ಎಸ್.ಬಿ., ಸಹಾಯಕ ನಿರ್ದೇಶಕ ಕೃಷ್ಣಾನಂದ.ಕೆ., ವ್ಯವಸ್ಥಾಪಕರಾದ ಶ್ರೀರಾಮ ಭಟ್ಟ, ರಾಜು ನಾಯ್ಕ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ವಿವಿಧ ಇಲಾಖಾ ಅಧಿಕಾರಿಗಳು, ಎಲ್ಲಾ ಪಂಚಾಯತದ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.
More Stories
ಸಾನ್ವಿ ರಾವ್ ಹೊನ್ನಾವರ, ದ್ವೀತಿಯ ಪಿಯುಸಿ ಕಾಮರ್ಸ ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ. :
ಬಿಜೆಪಿ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಏನೂ ಮಾಡಿಲ್ಲ: ಮಂಕಾಳ ವೈದ್ಯ ಟೀಕೆ
ಬಿಜೆಪಿ ಬಿಜೆಪಿ ಎಂದು ಕುಣಿಯುವ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್: ದೇಶಪಾಂಡೆ