May 10, 2024

Bhavana Tv

Its Your Channel

ಪೋಟೋಗ್ರಾಪರ್ಸ ಮತ್ತು ವಿಡಿಯೋಗ್ರಾಪರ್ಸ ಅಸೋಸಿಯೇಶನ್ 17 ನೇ ವರ್ಷದ ವಾರ್ಷಿಕೊತ್ಸವ

ಹೊನ್ನಾವರ: ಒರ್ವ ಛಾಯಗ್ರಾಹಕ ತೆಗೆದ ಛಾಯಚಿತ್ರ ಮುಂದಿನ ತಲೆಮಾರಿಗೆ ಒಂದು ದಾಖಲೆಯಾಗಿ ಸದಾ ಕಾಲ ಇರಲಿದೆ ಅಂತಹ ಮಹ ತ್ಕಾರ್ಯ ಛಾಯಗ್ರಾಹಕರು ಮಾಡುತ್ತಿದ್ದಾರೆ ಎಂದು ಸೇಪ್ ಸ್ಟಾರ್ ಸಮೋಹ ಸಂಸ್ಥೆಯ ಅಧ್ಯಕ್ಷ ಜಿ.ಜಿ.ಶಂಕರ ಮೆಚ್ಚುಗೆ ವ್ಯಕ್ತಪಡಿಸಿದರು.
ಹೊನ್ನಾವರ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಹೊನ್ನಾವರ ತಾಲೂಕ ಪೋಟೋಗ್ರಾಪರ್ಸ ಮತ್ತು ವಿಡಿಯೋಗ್ರಾಪರ್ಸ ಅಸೋಸಿಯೇಶನ್ ಆಯೋಜಿಸಿದ 17 ನೇ ವರ್ಷದ ವಾರ್ಷಿಕೊತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸರ್ಕಾರ ಮುಂದಿನ ದಿನದಲ್ಲಿ ಈ ವೃತ್ತಿಯಲ್ಲಿ ಇರುವವರಿಗೆ ಸಂಕಷ್ಟಕ್ಕೆ ನೆರವಾಗಲು ಪ್ರಾಧಿಕಾರ ರಚನೆಯಾಗಲಿ ಎಂದು ಶುಭಹಾರೈಸಿದರು. ಮುಂದಿನ ದಿನದಲ್ಲಿ ಸೇಪ್ ಸ್ಟಾರ ಸಂಸ್ಥೆಯ ವತಿಯಿಂದ ಜಿಲ್ಲೆಯ ವೃತ್ತಿಭಾದಂವರಿಗೆ ಉಚಿತ ಅಪಘಾತವಿಮೆ ಸೌಲಭ್ಯ ಮಾಡುವ ಮೂಲಕ ಉತ್ಸುಕತೆ ಹೊಂದಿರುದಾಗಿ ಭರವಸೆ ನೀಡಿದರು.
ತಾಲೂಕಿನ ಪೊಟೋಗ್ರಾಪರ್ ಷಣ್ಮುಖ ಭಟ್, ಗಣೇಶ ಶೆಟ್ಟಿ, ಸುಭಾಶ ನಾಯ್ಕ, ವಿಠ್ಠಲ್ ಭಂಡಾರಿ, ರಮೇಶ ಮೇಸ್ತ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶೈಕ್ಷಣಿಕ ವಿಭಾಗದಲ್ಲಿ ಸಧನೆ ಮಾಡಿ ಯೂನಿಯನ್ ಸದಸ್ಯರ ಮಕ್ಕಳನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಯಧುವೀರ ಕೊ.ಆಪರೇಟಿವ್ ಅಧ್ಯಕ್ಷ ಶ್ರೀಕಾಂತ ನಾಯ್ಕ ಮಾತನಾಡಿ ನಮ್ಮ ಹೊನ್ನಾವರ ಪ್ರವಾಸೊದ್ಯಮ ರಂಗದಲ್ಲಿ ಬೆಳೆಯಲು ಸರ್ಕಾರದಿಂದ ನಿರಿಕ್ಷೀತ ಪ್ರಮಾಣದಲ್ಲಿ ಪೊತ್ಸಾಹ ದೊರೆಯುತ್ತಿಲ್ಲ. ಪ್ರವಾಸೊದ್ಯಮ ಅಭಿವೃದ್ದಿ ಹೊಂದಿದರೆ, ಈ ಭಾಗದ ಪೊಟೊಗ್ರಾಫರ್ ವೃತ್ತಿಯವರಿಗೆ ಆದಾಯ ಬರಲಿದೆ.
ಪತ್ರಕರ್ತ ಸಂಘದ ಅಧ್ಯಕ್ಷ ಸತೀಶ ತಾಂಡೇಲ್ ಮಾತನಾಡಿ ಬದುಕಿನ ನೆನಪಿನ ಬುತ್ತಿಯನ್ನು ಕಟ್ಟಿಕೊಡುವವರು ಪೊಟೋಗ್ರಾಫರ್. ಸಮಾಜಕ್ಕೆ ಮತ್ತು ಇವರಿಗೆ ಅವಿನಾಭಾವ ಸಂಭದವಿದೆ. ಮನುಷ್ಯನ ಜನನ, ಮದುವೆ, ಮರಣ ಈ ಎಲ್ಲಾ ಕಾರ್ಯಕ್ರಮಕ್ಕೂ ನಿಮ್ಮ ವೃತ್ತಿಯವರು ಅವಶ್ಯಕತೆ ಇದೆ. ಪ್ರತಿಭಾನ್ವಿತ ಪೊಟೋಗ್ರಾಫರ್ ತವರೂರು ಹೊನ್ನಾವರವಾಗಿದೆ. ಕಾಂತಾರ ಸಿನಿಮಾದಲ್ಲಿ ಸ್ಟೀಲ್ ಪೊಟೊಗ್ರಾಫಿ ಮಾಡಿದವರು ಹೊನ್ನಾವರ ಪೊಟೋಗ್ರಾಫರ್ ಶಿಷ್ಯರಾಗಿರುವುದು ಹೆಮ್ಮೆಯ ವಿಷಯ. ಸರ್ಕಾರ ಇವರಿಗೆ ಅನೇಕ ಸೌಲಭ್ಯ ಒದಗಿಸಿದರೆ ಇನ್ನಷ್ಟು ಪ್ರತಿಭಾವಂತರು ತಮ್ಮ ಪ್ರತಿಭೆ ಪ್ರದರ್ಶಿಸಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕ ಸಂಘದ ಅಧ್ಯಕ್ಷ ಸುರೇಶ ಹೊನ್ನಾವರ ಮಾತನಾಡಿ ದೀಪದ ಬುಡಕ್ಕೆ ಕತ್ತಲು ಎನ್ನುವಂತೆ ಅನೇಕ ಸವಾಲಿನ ಮಧ್ಯೆ ವೃತ್ತಿ ನಿಭಾಹಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಅನೇಕ ಏಳುಬೀಳುಗಳ ಮಧ್ಯೆ ಸದಸ್ಯರ ಆರ್ಥಿಕ ಸಂಕಷ್ಟಕ್ಕೆ ನೆರವಾಗುದಲ್ಲದೇ, ಸದಸ್ಯರ ಮಕ್ಕಳ ಪ್ರತಿಭೆಗೂ ಪೊತ್ಸಾಹ ನೀಡುತ್ತಾ ಬಂದಿರುದಾಗಿ ಸಂಘದ ಕಾರ್ಯ ವೈಖರಿಯ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೆ.ಪಿ.ಎ ಜಂಟಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್, ತಾಲೂಕ ಸಂಘದ ಉಪಾಧ್ಯಕ್ಷರಾದ ಸತೀಶ ನಾಯ್ಕ,ರಾಘವ ಮೇಸ್ತ, ಸೇರಿದಂತೆ ತಾಲೂಕಿನ ಪೋಟೋ ಹಾಗೂ ವಿಡಿಯೋಗ್ರಾಪರ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಸತ್ಯನಾರಾಯಣ ಪೂಜೆ, ಗಣಹೋಮ ಸೇರಿದಂತೆ ಮಹಾಗಣಪತಿ ದೇವರಿಗೆ ವಿಶೇಷ ಪೂಜಾ ಧಾರ್ಮಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮದ ನಂತರ ಮನೊರಂಜನಾ ಕಾರ್ಯಕ್ರಮ ನೇರವೇರಿತು. ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ ಭಂಡಾರಿ ಸ್ವಾಗತಿಸಿ, ಉಪಾಧ್ಯಕ್ಷ ರಾಘವ ಮೇಸ್ತ ವಂದಿಸಿದರು. ಮೋಹನ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

error: