ಹೊನ್ನಾವರ : ತಾಲೂಕಿನ ಮಾವಿನಕುರ್ವಾ-ಹೊನ್ನಾವರ ಸಂಪರ್ಕ ಸೇತುವೆ ಕೊನೆಯ ಹಂತದ ಕಾಮಗಾರಿ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ,ಕೂಡಲೇ ಸಂಭAದಪಟ್ಟವರು ಎಚ್ಚೆತ್ತು ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆಸಬೇಕೆನ್ನುವ ಆಗ್ರಹ ಕೇಳಿಬಂದಿದೆ.
ಮಾವಿನಕುರ್ವಾ-ಹೊನ್ನಾವರ ಸಂಪರ್ಕ ಸೇತುವೆ ಬಹುತೇಕ ಮುಕ್ತಾಯ ಹಂತ ತಲುಪಿದೆ. ಸೇತುವೆ ಕೊನೆಯ ಹಂತದಲ್ಲಿ ಚರ್ಚರಸ್ತೆಯ ತಾರಿಬಾಗಲು ನದಿತಟದ ಸಮೀಪದಲ್ಲಿ ಸೇತುವೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ದಡಕ್ಕೆ ಸೇತುವೆಗೆ ಇರುವ ಅಂದಾಜು ಐವತ್ತು ಮೀಟರ್ ಅಂತರದಲ್ಲಿ ನದಿಗೆ ಅಡ್ಡಲಾಗಿ ಮಣ್ಣು ತುಂಬಲಾಗಿದೆ. ಇನ್ನೊಂದು ಹಂತದಲ್ಲಿ ಕಾಮಗಾರಿ ನಡೆಸಿ ಜಿರೋ ಹಂತ ತಲುಪಿದಲ್ಲಿ ಸಮರ್ಪಕವಾಗಿರುತ್ತಿತ್ತು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಇನ್ನೂ ಸೇತುವೆ ಕಾಮಗಾರಿ ಸಮೀಪವೇ ನೀರಿನ ಟ್ಯಾಂಕ್ ,ಬಸ್ ತಂಗುದಾಣ ಇರುವುದು ಮುಂದಿನ ದಿನಗಳಲ್ಲಿ ಇದು ಸಮಸ್ಯೆಯೊಡ್ಡುತ್ತದೆ.ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಅನಾಹುತಕ್ಕೆ ಎಡೆಮಾಡಿಕೊಡುತ್ತದೆ ಎನ್ನುವ ಮಾತು ಕೇಳಿಬಂದಿದೆ.
ಈ ಕುರಿತು ಪಟ್ಟಣ ಪಂಚಾಯತ ಸದಸ್ಯ ಶಿವರಾಜ ಮೇಸ್ತ ಮಾತನಾಡಿ,ಈ ಮೊದಲಿನಂತೆ ಕಾಮಗಾರಿ ಎಸ್ಟಿಮೇಟ್ ಪ್ರಕಾರ ನಡೆದಲ್ಲಿ ನದಿತಟದಿಂದ ಕೇವಲ ಹತ್ತು ಮೀಟರ್ ನೊಳಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು.ಸೇತುವೆ ಎತ್ತರವಾಗಿದ್ದರಿಂದ ಇದೀಗ ನದಿತಟದಿಂದ ಅಂತರ ಹೆಚ್ಚಾಗಿದೆ ಇದರಿಂದ ಸಮಸ್ಯೆ ಉಂಟಾಗಿದೆ.ಗುತ್ತಿಗೆದಾರ ಕಂಪನಿ ಈ ಬಗ್ಗೆ ಗಮನಹರಿಸಬೇಕು.ಸಮರ್ಪಕ ಕಾಮಗಾರಿ ನಡೆಸಬೇಕೆಂದು ಆಗ್ರಹಿಸಿದರು.ನೀರಿನ ಟ್ಯಾಂಕ್ ,ಬಸ್ ತಂಗುದಾಣ ಪಟ್ಟಣ ಪಂಚಾಯತಕ್ಕೆ ಸಂಬAಧಿಸಿರುವುದರಿAದ ಸೂಕ್ತ ಪರಿಹಾರದ ಜತೆಗೆ ಪರ್ಯಾಯ ವ್ಯವಸ್ಥೆ ಮಾಡಿದಲ್ಲಿ ಅದನ್ನು ತೆರವುಗೊಳಿಸಲು ಸಹಕಾರ ನೀಡುತ್ತೇವೆ ಎಂದರು.
ಸೇತುವೆ ಕಾಮಗಾರಿ ಗುತ್ತಿಗೆದಾರ ಕಂಪನಿಯ ಇಂಜಿನಿಯರ್ ಆನಂದ್ ಮಾತನಾಡಿ, ಸ್ಥಳೀಯರು ತಮಗೆ ಅನೂಕೂಲವಾಗುವಂತೆ ಈ ಹಿಂದೆ ಬೇಡಿಕೆ ಇಟ್ಟಿದ್ದು ನಿಜ. ಪಟ್ಟಣ ಪಂಚಾಯತ ಬಸ್ ತಂಗುದಾಣ,ನೀರಿನ ಟ್ಯಾಂಕ್ ತೆರವುಗೊಳಿಸಲು ಅನುಮತಿ ನೀಡಿದರೆ ಸ್ಥಳೀಯರ ಆಗ್ರಹದಂತೆ ಕಾಮಗಾರಿ ನಡೆಸುವ ಭರವಸೆ ನೀಡಿದ್ದೇವೆ. ಕಾಮಗಾರಿಯಲ್ಲಿ ಯಾವುದೇ ಲೋಪವಾಗದೆ ಎಸ್ಟಿಮೇಟ್ ಪ್ರಕಾರದಲ್ಲಿ ನಡೆದಿದೆ ಎಂದರು.
ಪಪA ಸದಸ್ಯೆ ಜೋಸ್ಬಿನ್ ಡಯಾಸ್ ಮಾತನಾಡಿ, ಇಲ್ಲಿರುವ ನೀರಿನ ಟ್ಯಾಂಕ್ ಪ್ರವಾಸಿಗರಿಗೆ,ಇಲ್ಲಿನ ಸಾರ್ವಜನಿಕರಿಗೆ ತೀರಾ ಅನೂಕೂಲಕರವಾಗಿದೆ. ಇದನ್ನು ಕೆಡವು ಬದಲು ಲಿಫ್ಟಿಂಗ್ ಪ್ರಕ್ರಿಯೆ ಮೂಲಕ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದರು.
ಟ್ಯಾAಕ್ ಮತ್ತು ಬಸ್ ನಿಲ್ದಾಣ ತೆಗೆದಲ್ಲಿ ಮಾತ್ರ ಸೇತುವೆ ಕಾಮಗಾರಿ ವೈಜ್ಞಾನಿಕ ರೀತಿಯಲ್ಲಿ ಆಗಲು ಸಾಧ್ಯವಾಗುತ್ತದೆ. ಮುಂದೆ ಬಸ್ ಸಂಚಾರವಾಗಲು ಅನೂಕೂಲವಾಗುತ್ತದೆ.ಈ ಬಗ್ಗೆ ಕಂಪನಿಯವರು ಪಟ್ಟಣ ಪಂಚಾಯತಕ್ಕೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ಮಾವಿನಕುರ್ವಾ-ಹೊನ್ನಾವರ ಸಂಪರ್ಕ ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಪೀಟರ್ ಮೆಂಡಿಸ್ ಹೇಳಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
ಸಾನ್ವಿ ರಾವ್ ಹೊನ್ನಾವರ, ದ್ವೀತಿಯ ಪಿಯುಸಿ ಕಾಮರ್ಸ ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ. :
ಬಿಜೆಪಿ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಏನೂ ಮಾಡಿಲ್ಲ: ಮಂಕಾಳ ವೈದ್ಯ ಟೀಕೆ
ಬಿಜೆಪಿ ಬಿಜೆಪಿ ಎಂದು ಕುಣಿಯುವ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್: ದೇಶಪಾಂಡೆ