May 3, 2024

Bhavana Tv

Its Your Channel

ಪಿ.ಡಿ.ಓ ಪ್ರಶಾಂತ ಶೆಟ್ಟಿ ಬೈಕ್ ಅಪಘಾತದಲ್ಲಿ ಮೃತ

ಕುಮಟಾ : ಹೊನ್ನಾವರ ತಾಲೂಕಿನ ಇಡಗುಂಜಿ ಹಾಗೂ ಸಾಲ್ಕೋಡ ಎರಡೂ ಪಂಚಾಯತಗಳ ಪಿ.ಡಿ.ಓ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಶಾಂತ ಶೆಟ್ಟಿ ಅವರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ .

ಅವರು ಶುಕ್ರವಾರ ಮಧ್ಯಾಹ್ನ ಕಾರವಾರದಲ್ಲಿ ನಡೆಯಲಿದ್ದ ಕಂಪ್ಯೂಟರ್ ಪರೀಕ್ಷೆಗೆ ಹಾಜರಾಗಲು ಬೈಕ್‌ನಲ್ಲಿ ಹೋಗುತ್ತಿರುವಾಗ ದುಂಡಕುಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕಸ್ಮಿಕವಾಗಿ ಬೈಕ್‌ನ ನಿಯಂತ್ರಣ ತಪ್ಪಿ ಹೆದ್ದಾರಿಯ ಪಕ್ಕದ ಕಂದಕಕ್ಕೆ ಬಿದ್ದಿದ್ದಾರೆ . ಕಂದಕದಲ್ಲಿದ್ದ ಕಲ್ಲು ಪ್ರಶಾಂತ ಅವರ ತಲೆ ಭಾಗಕ್ಕೆ ತೀವ್ರತರಹದ ಪೆಟ್ಟು ತಗಲುವಂತೆ ಮಾಡಿದೆ . ಇದರಿಂದ ಅಧಿಕ ರಕ್ತಸ್ರಾವ ಉಂಟಾಗಿದೆ . ಸ್ಥಳೀಯರು ತಕ್ಷಣ ತಾಲೂಕು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ . ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: