May 21, 2024

Bhavana Tv

Its Your Channel

ಕಿರು ಅವಧಿಯ ಸೇನಾ ನೇಮಕಾತಿ ಪ್ರಕ್ರಿಯೆಯ ಅಗ್ನಿಪಥ ಯೋಜನೆಯ ವಿರುದ್ದ ಕುಮಟಾ ಮತ್ತು ಹೊನ್ನಾವರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ

ಕುಮಟಾ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಿರು ಅವಧಿಯ ಸೇನಾ ನೇಮಕಾತಿ ಪ್ರಕ್ರಿಯೆಯ ಅಗ್ನಿಪಥ ಯೋಜನೆಯ ವಿರುದ್ದ ಕುಮಟಾ & ಹೊನ್ನಾವರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಯಿತು 4 ವರ್ಷಗಳ ಕಾಲ ಮಾತ್ರ ಕೆಲಸವನ್ನು ನೀಡಿ ನಂತರ ನಿರುದ್ಯೋಗಿಗಳನ್ನಾಗಿ ಮಾಡುವ ಯೋಜನೆ ಎಂದು ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ಭೀಮಣ್ಣ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.

ಅಗ್ನಿಪಥ ಯೋಜನೆ ಯುವ ಜನರನ್ನು ದಾರಿ ತಪ್ಪಿಸುವ ಯೋಜನೆಯಾಗಿದೆ. ಈ ಯೋಜನೆ ಖಾಸಗಿ ಕಂಪನಿಗಳು ಮತ್ತು ಏಜೆನ್ಸಿಗಳು ವ್ಯವಸ್ಥಿತವಾಗಿ ಲಾಭ ಪಡೆದುಕೊಳ್ಳುವುದಕ್ಕೆ ಮಾಡಲಾಗಿದೆ ಸೈನ್ಯದಲ್ಲೂ ಗುತ್ತಿಗೆ ಪದ್ದತಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಹೊರಟಿದೆ.4 ವರ್ಷ 6 ತಿಂಗಳು ತರಬೇತಿ ನೀಡಿ ಅಲ್ಪ ಸ್ವಲ್ಪ ಹಣಕಾಸು ನೀಡಿ ಅವರನ್ನು ಮನೆಗೆ ಕಳುಹಿಸಿದ ನಂತರ ಅವರು ಯಾವದೇ ಉದ್ಯೋಗವನ್ನು ಮಾಡದೆ, ಮನೆಯ ಕೆಲಸವನ್ನು ಹಾಗೂ ಕೂಲಿಯನ್ನು ಮಾಡಲು ಸಹ ಅವರಿಗೆ ಮನಸ್ಸು ಒಪ್ಪುವುದಿಲ್ಲ. ಒಬ್ಬ ಯೋಧ ಕನಿಷ್ಠ 5 ವರ್ಷ ಸೇವೆಯನ್ನು ಸಲ್ಲಿಸಿದಾಗ ಮಾತ್ರ ನಿವೃತ್ತ ಯೋಧ ಎನ್ನುವ ಭಾಗ್ಯವನ್ನು ಸಹ ಬಿಜೆಪಿ ಕಿತ್ತುಕೊಂಡಿದೆ. ಬಿಜೆಪಿಯ ಸರಕಾರ ಬಗ್ಗೆ ಭರವಸೆಯನ್ನು ಇಟ್ಟುಕೊಂಡು ದೇಶದ ಅಭಿವೃದ್ದಿ ಪ್ರಗತಿಯನ್ನು ಕಾಣುತ್ತೇವೆ ಎಂದು ಭಾವಿಸಿದ ಜನಸಾಮಾನ್ಯರಿಗೆ ನಿರಾಸೆಯಾಗಿದೆ. ಇಂದು ರೈತರು ಕೃಷಿಗೆ ಬಳಸುವ ರಸಗೊಬ್ಬರದಿಂದ ಹಿಡಿದು ಅಡುಗೆ ಅನಿಲದ ಬೆಲೆಯನ್ನು ಸಹ ಏರಿಕೆ ಮಾಡಿ ಜನಸಾಮಾನ್ಯರೊಂದಿಗೆ ಬಿಜೆಪಿ ಸರಕಾರ ಚಲ್ಲಾಟವಾಡುತ್ತಿದೆ ಎಂದು ಹೆಳಿದರು.

ಮಾಜಿ ಶಾಸಕರಾದ ಶಾರದಾ ಶೆಟ್ಟಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2 ಕೋಟಿ ಉದ್ಯೋಗವನ್ನು ಸೃಷ್ಠಿ ಮಾಡುತ್ತೇವೆ ಎಂದು ಹೇಳಿದರು. 17ರಿಂದ 23 ವರ್ಷದ ಯುವಕರಿಗೆ ಅವಕಾಶ ನೀಡುವ ಕೆಲಸವಾಗಿದೆ. 17 ವರ್ಷ ಅಂದರೆ ಶಿಕ್ಷಣವೇ ಮುಗಿದಿರುವುದಿಲ್ಲ. ಈ ಅಗ್ನಿಪಥ ಕಾರ್ಯಕ್ರಮದಲ್ಲಿ ಸೈನ್ಯಕ್ಕೆ ಸೇರುವವರು ಬಡವರು, ಹಾಗೂ ಕೂಲಿಕಾರ ಮಕ್ಕಳು ಅವರಿಗೆ 4 ವರ್ಷಗಳ ಕಾಲ ಕೆಲಸವನ್ನು ನೀಡಿ ಅವರಿಗೆ ಮನೆಗೆ ಕಳುಹಿಸುವ ಕೆಲಸವಾಗಿದೆ..5 ವರ್ಷಗಳ ಕಾಲ ಅವರಿಗೆ ಸೇವೆಗೆ ಅನುಮತಿ ನೀಡಿ ನಿವೃತ್ತಿಯಾದರೆ ಪಿಂಚಣಿ ನೀಡಬೇಕಾಗುತ್ತದೆ ಉದ್ದೇಶವನ್ನು ಹೊಂದಿದೆ.ಸರಕಾರ ಜಾರಿಗೆ ತಂದ ಕಾಯ್ದೆಗಳು ಜನರ ಸಾಮಾನ್ಯ ಹಿತವನ್ನು ಎಷ್ಟ ಮಟ್ಟಿಗೆ ಕಾಯುತ್ತದೆ ಎನ್ನುವುದು ಮುಖ್ಯ ಎಂದು ಹೇಳಿದರು.

ಕೇಂದ್ರ ಹಾಗೂ ದೇಶದೆಲ್ಲಡೆ 27 ಲಕ್ಷ ಉದ್ಯೋಗ್ಯವನ್ನು ಭರ್ತಿ ಮಾಡಬೇಕಾಗಿದೆ. ಇನ್ನೂ ಮುಂದೆ ಸೈನ್ಯದಲ್ಲೂ ಸಹ ಹೊರಗುತ್ತಿಗೆಯ ಆಧಾರದ ಮೇಲೆ ಸೇರಿಸಿಕೊಂಡು ಅವರಿಗೆ ಪಿಂಚಣಿಯ ಸೌಲಭ್ಯವನ್ನು ನೀಡದೆ ಇರುವುದು. ಅಗ್ನಿಪಥ ಎನ್ನುವ ಹೆಸರಿನಲ್ಲಿ 4 ವರ್ಷ ಮಾತ್ರ ನೀಡುತ್ತೇವೆ ಎನ್ನಲು ಮುಖ್ಯಕಾರಣ ಅವರಿಗೆ ಪಿಂಚಣಿ ಸೌಲಭ್ಯವನ್ನು ನೀಡಬಾರದು ಎನ್ನುವ ಉದ್ದೇಶವನ್ನು ಹೊಂದಿದೆ ಎಂದು ಮಾಜಿ .ಜಿ.ಪಂ ಸದಸ್ಯರಾದ ಪ್ರದೀಪ ನಾಯಕ ದೇವರಭಾವಿ ಹೇಳಿದರು.

ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರಕಾರವು ಅಭಿವೃದ್ದಿ ಮಾಡಿದ ಕಾರ್ಯಕ್ರಮಗಳ ಪಟ್ಟಿಯನ್ನು ನೀಡಿ ಅವರು ಮಾತನಾಡಲಿ ಅದನ್ನು ಬಿಟ್ಟು ಯುವಕರನ್ನು ಅಗ್ನಿಪಥ ಎನ್ನುವ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಯೋಜನೆಯಾಗಿದೆ ಅಮಾಯಕರನ್ನು ಬಲಿ ಕೊಡುತ್ತಿದ್ದಾರೆ. ಈ ಯೋಜನೆ ವಾಪಾಸ್ ಪಡೆಯುವವರೆಗೂ ಹೋರಾಟ ಮಾಡುತ್ತೇವೆ ಕಾಂಗ್ರೆಸ್ ಮುಖಂಡರು ಹಾಗೂ ಕರವೇ ಜಿಲ್ಲಾಧ್ಯಕ್ಷರಾದ ಭಾಸ್ಕರ ಪಟಗಾರ ಹೇಳಿದರು.

ಈ ಸಂಧರ್ಭದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ. ಮಾಜಿ ಜಿ.ಪಂ ಸದಸ್ಯರಾದ ರತ್ನಾಕರ ನಾಯ್ಕ, ಹೊನ್ನಪ್ಪ ನಾಯಕ, ಕಾಂಗ್ರೆಸ್ ಸೇವಾದಳದ ಮಾಜಿ ಅಧ್ಯಕ್ಷರಾದ ಆರ್.ಎಚ್.ನಾಯ್ಕ. ಪುರಸಭಾ ಮಾಜಿ ಅಧ್ಯಕ್ಷರಾದ ಮಧುಸೂಧನ ಶೇಟ್ ಮುಖಂಡರಾದ ಮಂಜುನಾಥ ನಾಯ್ಕ, ಸೇರಿದಂತೆ ಇತರಿದ್ದರು

ವರದಿ: ನಟರಾಜ ಗದ್ದೆಮನೆ

error: