May 19, 2024

Bhavana Tv

Its Your Channel

ಬೆಟ್ಕುಳಿಯಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ರೂ. 10 ಲಕ್ಷಗಳ ಡಿಡಿ ನೀಡಿದ ಡಾ. ಶ್ರೀ ವಿರೇಂದ್ರ ಹೆಗ್ಗಡೆ

ಕುಮಟಾ: ಉ. ಕ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮದ ನಾಮಧಾರಿ ಅಭಿವೃದ್ಧಿ ಸಂಘ ರಿ. ಬೆಟ್ಕುಳಿ ಇವರು ಬೆಟ್ಕುಳಿಯಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನದ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಾಧಿಕಾರಿಗಳಾದ ಡಾ|| ಶ್ರೀ ವಿರೇಂದ್ರ ಹೆಗ್ಗಡೆಯವರು ಸಮುದಾಯ ಭವನ ನಿರ್ಮಾಣಕ್ಕೆ ರೂ. 10 ಲಕ್ಷಗಳ ಡಿಡಿ ಯನ್ನು ನೀಡಿದರು.
ಶ್ರೀ ಕ್ಷೇತ್ರದ ಸಹಾಯ ಕೋರಿ ಸಾಮಾಜಿಕ ಮುಖಂಡ ಚಂದ್ರಶೇಖರ ಜೀನದತ್ತ ಗೌಡ ಮಂಕಿ ಮೂಲಕ ಮನವಿ ಸಲ್ಲಿಸಿದ್ದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶ್ರೀ ಕ್ಷೇತ್ರವೂ ಬೆಟ್ಕುಳಿಯ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಮಣ್ಣ ತಿಮ್ಮಣ್ಣ ನಾಯ್ಕ ರವರಿಗೆ ಡಿಡಿ ಹಸ್ತಾಂತರಿ ಶುಭ ಕೋರಿ ಸಮುದಾಯ ಭವನ ಆದಷ್ಟು ಬೇಗ ಸುಸಜ್ಜಿತವಾಗಿ ಪೂರ್ಣಗೊಂಡು ಜನೋಪಯೋಗಿ ಕಾರ್ಯಕ್ಕೆ ತೆರೆದುಕೊಳ್ಳಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಜಿನದತ್ತ ಗೌಡ ಮಂಕಿ ಹಾಗೂ ಬೆಟ್ಕುಳಿ ನಾಮಧಾರಿ ಸಂಘದ ಉಪಾಧ್ಯಕ್ಷ ತುಕಾರಾಮ ನಾರಾಯಣ ನಾಯ್ಕ, ಸದಸ್ಯರಾದ ಮಂಜುನಾಥ ಲೋಲಾಕ್ಷ ನಾಯ್ಕ ಮತ್ತು ಮಂಜುನಾಥ ಗಣಪತಿ ನಾಯ್ಕ ಉಪಸ್ಥಿತರಿದ್ದರು.

error: