ಕುಮಟಾ: ತಾಲೂಕಿನ ಊರಕೇರಿಯ ನಿವೃತ್ತ ಸೈನಿಕ ಡಾ. ಕೃಷ್ಣರಾಯ ವೆಂಕಟರಮಣ ನಾಯಕ ಅಗ್ರಬಾರ (ಕೆ.ಆರ್.ನಾಯಕ) (82) ಅವರು ಸೋಮವಾರ ತಡರಾತ್ರಿ ನಿಧನರಾದರು.
ಅವರು ಬಾರತೀಯ ಸೈನ್ಯದ ಮೊದಲ ದರ್ಜೆಯ ನರ್ಸಿಂಗ್ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತರಾಗಿ ಅನಂತರ ಕನಾಟಕ ಸರಕಾರದಲ್ಲಿ ಕೃಷಿ ಸಹಾಯಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಆರ್.ಎಂ.ಪಿ. ಆಗಿಯೂ ಹಳ್ಳಿಗಾಡಿನ ಜನರ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದರು.
ಸೈನ್ಯದಲ್ಲಿರುವಾಗಲೇ ಇಂಡಿಯನ್ ಪ್ಯಾರಾಟ್ರೂಪರ್ ಆಗಿಯೂ ತಮ್ಮ ಪ್ರತಿಭೆ ಮೆರೆದ ಕೃಷ್ಣರಾಯ ನಾಯಕ ಅವರು 14 ಬಾರಿ ಪ್ಯಾರಾಟ್ರೂಪ್ ನಿಂದ ಇಳಿದು ಸಾಧನೆಗೈದಿದ್ದರು.
ಪ್ರಜಾಪಿತ ಬ್ರಹ್ಮಾಕುಮಾರಿ ಸಂಸ್ಥೆಯ ಅನುಯಾಗಿದ್ದ ಅವರು ಪತ್ನಿ, ಇಬ್ಬರು ಪುತ್ರರನ್ನು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
More Stories
ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ
ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರು ಮರಳಿ ಕಾಂಗ್ರೆಸ್ಗೆ ಸೇರ್ಪಡೆ.
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ!