May 17, 2024

Bhavana Tv

Its Your Channel

ಮುರ್ಡೇಶ್ವರದ ಶಿಲ್ಪಿ ಸತೀಶ ದೇವಾಡಿಗ ತಂಡದವರಿಗೆ ಅರ್ಜುನ ಸರ್ಜಾರಿಂದ ಗೌರವ

ಭಟ್ಕಳ: ವಾಯುಪುತ್ರ ಹನುಮಂತನ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿರುವ ನಟ ಅರ್ಜುನ್ ಸರ್ಜಾ ಕೊನೆಗೂ ತಾವು ಕಂಡಿದ್ದ ಕನಸು ಈಡೇರಿಸಿಕೊಂಡಿದ್ದು. ಸರ್ಜಾ ಕಟ್ಟಿಸಿದ್ದ ಆಂಜನೇಯ ಸ್ವಾಮಿ ದೇವಸ್ಥಾನದ ಕುಂಭಾಭಿಷೇಕ ನೆರವೇರಿದ್ದು ಇದೆ ವೇಳೆ ದೇವಸ್ಥಾನದ ದ್ವಾರಕೆತ್ತನೆ ಮಾಡಿದ ಮುರ್ಡೇಶ್ವರದ ಸತೀಶ ದೇವಾಡಿಗ ಅವರ ತಂಡಕ್ಕೆ ನಟ ಅರ್ಜುನ್ ಸರ್ಜಾ ಸನ್ಮಾನಿಸಿ ಧನ್ಯವಾದ ತಿಳಿಸಿದ್ದಾರೆ.
ಮುರ್ಡೇಶ್ವರದ ಶಿಲ್ಪಿ ಸತೀಶ ದೇವಾಡಿಗ ತಂಡದ ಯುವ ಶಿಲ್ಪಿಗಳಾದ ವಿಜಯ್ ನಾಯ್ಕ ಭಟ್ಕಳ, ಭರತ್ ನಾಯ್ಕ ಕೊಡ್ಸುಳು, ಶರತ್ ನಾಯ್ಕ ಕೊಡ್ಸುಳು, ನಾಗರಾಜ್ ನಾಯ್ಕ ಮಾವಿನಕಟ್ಟೆ ಮತ್ತು ತಂಡದವರಿಗೆಅರ್ಜುನ್ ಸರ್ಜಾ ಮತ್ತು ಸರ್ಜಾ ಕುಟುಂಬದವರು ಗೌರವ ಸಲ್ಲಿಸಿದ್ದಾರೆ.

error: