May 3, 2024

Bhavana Tv

Its Your Channel

ಬಿಜೆಪಿ ಯುವಮೋರ್ಚಾ ಭಟ್ಕಳ್ ಮಂಡಲ ವತಿಯಿಂದ ಮುರ್ಡೇಶ್ವರ ಸಮುದ್ರ ತೀರವನ್ನು ಸ್ವಚ್ಚಗೊಳಿಸಲಾಯಿತು

ಭಟ್ಕಳ; ತಾಲ್ಲೂಕಿನ ಬಿಜೆಪಿ ಯುವಮೋರ್ಚಾ ಭಟ್ಕಳ್ ಮಂಡಲ ವತಿಯಿಂದ ರವಿವಾರದಂದು ಬಿಜೆಪಿ ಪಕ್ಷ ಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನದ ಅಂಗವಾಗಿ ಮುರ್ಡೇಶ್ವರ ಸಮುದ್ರ ತೀರವನ್ನು ಸ್ವಚ್ಚಗೊಳಿಸಲಾಯಿತು

ಬಿ.ಜೆ.ಪಿ ಯುವಮೋರ್ಚಾ ಭಟ್ಕಳ ಮಂಡಲ ಅಧ್ಯಕ್ಷ ಮಹೇಂದ್ರ ನಾಯ್ಕ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ನಡೆಯಿತು. ಮುರುಡೇಶ್ವರ ಬೀಚ್ ನ್ನು ಸ್ವಚ್ಛಗೊಳಿಸಿದರು. ಮುರುಡೇಶ್ವರ ಕಡಲ ತೀರದಲ್ಲಿ ಬಿದ್ದಿರುವ ಕಸ ಕಡ್ಡಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಯುವಮೋರ್ಚಾ ಪ್ರಧಾನಕಾರ್ಯದರ್ಶಿ ಸಂತೋಷ ಭಟ್ಕಳ್, ಜಿಲ್ಲಾ ಯುವ ಮೋರ್ಚಾ ಸದಸ್ಯರಾದ ಉದಯ ದೇವಾಡಿಗ, ತಾಲೂಕ ಯುವ ಮೋರ್ಚಾ ಅಧ್ಯಕ್ಷರಾದ ಮಹೇಂದ್ರ ನಾಯ್ಕ, ಯುವ ಮೋರ್ಚಾ ಪ್ರಧಾನಕಾರ್ಯದರ್ಶಿ ರವೀಶ್ ನಾಯ್ಕ್, ಕಿರಣ್ ನಾಯ್ಕ್, ಮಂಡಲ ಅಧ್ಯಕ್ಷರಾದ ಸುಬ್ರಯ ದೇವಾಡಿಗ, ಪ್ರಧಾನಕಾರ್ಯದರ್ಶಿಗಳಾದ ಮೋಹನ್ ನಾಯ್ಕ್, ಭಾಸ್ಕರ್ ಮೊಗೇರ್, ಮುಖಂಡರಾದ ಈಶ್ವರ ದೋಡ್ಡಮನೆ, ಅಣ್ಣಪ್ಪ ಗುಳ್ಳಾರಿ, ಈಶ್ವರ ನಾಯ್ಕ್ ಬೈಲೂರ್, ವಿನಾಯಕ ಆಚಾರಿ,ಚಂದ್ರು ಗೊಂಡ,ಯುವ ಮೋರ್ಚಾ ಪದಾಧಿಕಾರಿಗಳಾದ ಚಂದ್ರು ನಾಯ್ಕ್, ಅಜಯ್ ಕಾರ್ವಿ, ಮಾರುತಿ ಶಾನಬಾಗ್,ಭಟ್ಕಳ್ ಯುವ ಮೋರ್ಚಾ ಸಾಮಾಜಿಕ ಜಾಲತಾಣ ಪ್ರಮುಖರಾದ ಉಮೇಶ್ ನಾಯ್ಕ್ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು

error: