ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆನಗೋಡ ಪಂಚಾಯತದ ಸಾವಗದ್ದೆ ಗ್ರಾಮದ ಮೇಣಸುಪಾಲನಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಗರಾಜ ಚಿಕ್ಕು ಮರಾಠೆಯವರು ತಮ್ಮ ಊರಿಗೆ ಮರಳಿದಾಗ ಅವರಿಗೆ ಊರ ನಾಗರೀಕರ ಪರವಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಆನಗೋಡ ಪಂಚಾಯತದ ಮಾಜಿ ಅಧ್ಯಕ್ಷರಾದ ಎನ್.ಕೆ.ಭಟ್ಟ ಮೇಣಸುಪಾಲರವರು ಮಾತನಾಡಿ ಗ್ರಾಮೀಣ ಪ್ರದೇಶದ ಯುವಕ ನಾಗರಾಜರವರು ದೇಶದ ಗಡಿ ಭಾಗವಾದ ಚೀನಾ, ಪಾಕಿಸ್ತಾನ,ಬಾಂಗ್ಲಾದೇಶದ ಬೋರ್ಡರಗಳಲ್ಲಿ ರೈಫಲ್ ಹಿಡಿದು ಜನರನ್ನು,ದೇಶವನ್ನು ಕಾಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.ಅವರಂತೆ ಇನ್ನೂ ಅನೇಕ ಯುವಕರು ಸೈನ್ಯವನ್ನು ಸೇರಿ ದೇಶವನ್ನು ಕಾಯ್ದು, ದೇಶದ ಅಭಿವೃದ್ಧಿಯಲ್ಲೀ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಗದುಗಿನ ಆಯುರ್ವೇದ ವೈದ್ಯ ರವರು,ಊರಿನ ಹಿರಿಯರಾದ ಬಿ.ಜಿ.ಹೆಗಡೆ, ಶ್ರೀನಾಥ ಭಟ್ಟ, ವಿನಾಯಕ ಭಟ್ಟ,ಮುಜಾಫೀರ, ರಾಜೇಶ್ವರಿ, ಶ್ರುತಿ,ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು.
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ