May 6, 2024

Bhavana Tv

Its Your Channel

ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಂ.ಆರ್.ಹೆಗಡೆ, ಉಪಾಧ್ಯಕ್ಷರಾಗಿ ಎಂ.ಜಿ.ಭಟ್ಟ ಶೀಗೆಪಾಲ ಆಯ್ಕೆ

ವರದಿ :ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ( ಬಲ) ಉಪಾಧ್ಯಕ್ಷರಾಗಿ ಎಂ.ಜಿ.ಭಟ್ಟ ಶಿಗೇಪಾಲ್ ಅವಿರೋಧವಾಗಿ ಆಯ್ಕೆಯಾದರು

ಪಟ್ಟಣದ ಮದ್ಗುಣಿ ಕಾಂಫ್ಲೆಕ್ಸ್ ನಲ್ಲಿರುವ ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಚುನಾವಣೆ ಇತ್ತೀಚೆಗೆ ನಡೆದು ಮಂಗಳವಾರ ಪದಾಧಿಕಾರಿಗಳ ಆಯ್ಕೆ ನಡೆಯಿತು.ಕಳೆದ ೨೪ ವರ್ಷಗಳಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ಸಂಸ್ಥಾಪಕ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಅಧ್ಯಕ್ಷರಾಗಿ ಪುನರಾಯ್ಕೆ ಆದರು. ಉಪಾಧ್ಯಕ್ಷರಾಗಿ ಎಂ.ಜಿ.ಭಟ್ಟ ಶಿಗೇಪಾಲ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾಗಿ ಮಧುಕೇಶ್ವರ ಭಟ್ಟ ಕರಡಿಗೆಮನೆ, ಜಿ.ಆರ್.ಭಟ್ಟ ಬೆದೆಹಕ್ಲ, ರಾಘವೇಂದ್ರ ಭಟ್ಟ ಕಳಚೆ, ರವಿ ಹುಳಸೆ, ದತ್ತಾತ್ರೇಯ ಬೋಳಗುಡ್ಡೆ, ಎಂ.ಆರ್.ಹೆಗಡೆ ಚವತ್ತಿ, ಜಾನು ಗೊವಿಂದ ಗಾಡಿ ಸೋಮನಳ್ಳಿ, ರವೀಂದ್ರ ಗೌಡರ್, ಸುಮಾ ಹೆಗಡೆ ಬೆಳಗುಂದ್ಲಿ. ನಾಗವೇಣಿ ಭಟ್ಟ ಗಟ್ಟಿಮನೆ, ಹಾಗೂ ವಾಸು ಲಿಂಗಪ್ಪ ಭೋವಿ ಆಯ್ಕೆಯಾಗಿದ್ದರು.

error: