April 27, 2024

Bhavana Tv

Its Your Channel

ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಡಶಾಲೆಯಲ್ಲಿ ಕನಕ ಜಯಂತಿ ಆಚರಣೆ

ವರದಿ :ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಕನಕ ಜಯಂತಿ ಅಂಗವಾಗಿ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ಹರಿಕಥೆ ಗಮನ ಸೆಳೆಯಿತು.ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಜಾಗೃತ ಸಮಿತಿ ಯಲ್ಲಾಪುರ ಹಾಗೂ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಥಾಕೀರ್ತನ ಕೋವಿದ ಸಿರಿವಿಠ್ಠಲ ಅಂಕಿತ ಈಶ್ವರದಾಸ ಕೊಪ್ಪೇಸರ ಅವರು `ಭಕ್ತ ಕನಕದಾಸ’ ಕಥಾ ಕಾಲಕ್ಷೇಪ ಎಂಬ ಹರಿಕಥೆಯನ್ನು ನಡೆಸಿಕೊಟ್ಟರು. ರಾಮಚಂದ್ರ ಹೆಗಡೆ ಕೋಣೆಸರ ಅವರು ಹಾರ್ಮೋನಿಯಂ ಹಾಗೂ ಪ್ರದೀಪ ಕೋಟೆಮನೆ ಅವರು ತಬಲಾ ಸಾತ ನೀಡಿದರು. ಸಭಾ ಕಾರ್ಯಕ್ರಮವನ್ನು ಶ್ರೀಶಾರದಾಂಬಾ ದೇವಸ್ಥಾನದ ವ್ಯವಸ್ಥಾಪಕರಾದ ಅಶೋಕ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ, ಪ್ರಮುಖರಾದ ಗಂಗಾ ಭಟ್ಟ ಹಿತ್ಲಕಾರಗದ್ದೆ ಮೊದಲಾದವರು ಇದ್ದರು. ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯೆ ಹಾಗೂ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಮುಕ್ತಾ ಶಂಕರ ಸ್ವಾಗತಿಸಿ, ವಂದಿಸಿದರು3

error: