ಯಲ್ಲಾಪುರ :- ಶ್ರೀ ಮಹಾಗಜಲಕ್ಷ್ಮಿ ದೇವಸ್ಥಾನ ಶ್ರೀ ಕ್ಷೇತ್ರ ಮಂಚಿಕೇರಿ, ಯಲ್ಲಾಪುರ ತಾಲೂಕು ಇದರ ವಾರ್ಷಿಕ ವರ್ಧಂತಿ ಉತ್ಸವವು ವಿಜೃಂಭಣೆಯಿOದ ನೆರವೇರಿತು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಶ್ರೀ ದೇವರ ಸನ್ನಿಧಿಯಲ್ಲಿ ಗಣಪತಿ ಪೂಜನ, ನಾಗ ಪ್ರತಿಷ್ಠಾಪನೆ, ಆಶ್ಲೇಷ ಬಲಿ, ಸಹಸ್ರ ಮೋದಕ ಹವನ, ಸಾನಿಧ್ಯ ಹವನ, ದುರ್ಗಾ ನಮಸ್ಕಾರ, ಪಾರಾಯಣ, ನವಚಂಡಿಕಾ ಹವನ, ಮಹಪೂರ್ಣಹುತಿ,ಧ್ವಜಾರೋಹಣ,ಬ್ರಾಹ್ಮಣರಿಂದ ಆಶೀರ್ವಾಚನ ಮುಂತಾದ ದೈವಿಕ ಕಾರ್ಯಕ್ರಮಗಳು ನೆರವೇರಿದವು,
ಮಾಜಿ ವಿಧಾನಪರಿಷತ್ ಸದಸ್ಯರಾದ ಎಂ ಬಿ ಭಾನುಪ್ರಕಾಶ್ ರವರ ಉಪಸ್ಥಿತಿಯಲ್ಲಿ ಶ್ರೀ ದೇವರ ಸ್ವಪ್ನ ಚರಿತ್ರೆ ಲೇಖನ ಹಾಗೂ ಭಕ್ತಿಗೀತೆಯ ಧ್ವನಿಸುರುಳಿ ಬಿಡುಗಡೆಗೊಳಿಸಲಾಯಿತು. ನಂತರ ನೂತನ ಧರ್ಮಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ, ಧಾರ್ಮಿಕ ಸಭೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಶರರಾದ ಗಣೇಶ್ ಭಂಡಾರಕರ್, ಉಪಾಧ್ಯಕ್ಷರಾದ ಮೋಹನ್ ಭಂಡಾರಕರ್, ಟ್ರಸ್ಟೀಗಳಾದ ಅಕ್ಷಯ್ ಭಂಡಾರಕರ್, ಅಜಯ್ ಭಂಡಾರಕರ್, ರೋಹಿತ್ ಭಂಡಾರಕರ್ ಹಾಗೂ ಸಮಸ್ತ ಮಂಚಿಕೇರಿ ನಾಗರಿಕರು ಉಪಸ್ಥಿತರಿದ್ದು ಶ್ರೀ ದೇವರ ಸೇವೆಯಲ್ಲಿ ಪಾಲ್ಗೊಂಡಿದ್ದರು.
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ