ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗೇರಾಳದಲ್ಲಿ ನಮ್ಮನ್ನು ಅಗಲಿದ ಗೇರಾಳ ಗ್ರಾಮ ಅರಣ್ಯ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ದಿ. ಬಿ.ಜಿ.ಹೆಗಡೆ ಗೇರಾಳ ಇವರಿಗೆ ಗ್ರಾಮ ಅರಣ್ಯ ಸಮಿತಿಯ ಸಂಯೋಜನೆಯಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.
ಗ್ರಾಮ ಅರಣ್ಯ ಸಮಿತಿಯ ಸದಸ್ಯ ಹಾಗೂ ಭಾರತೀಯ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಡಾ.ರವಿ ಭಟ್ ಬರಗದ್ದೆ ನುಡಿನಮನವನ್ನು ಅರ್ಪಿಸುತ್ತಾ ಆಡು ಮುಟ್ಟದ ಸೊಪ್ಪಿಲ್ಲ ..ಬಿ ಜಿ ಹೆಗಡೆ ಸೇವೆ ಸಲ್ಲಿಸದ ಕ್ಷೇತ್ರಗಳಿಲ್ಲ. ಅವರನ್ನು ಕಳೆದುಕೊಂಡ ನಾವು ಕೇವಲ ಒಬ್ಬ ವ್ಯಕ್ತಿಯನ್ನಲ್ಲ ಬಹುಮುಖಿ ವ್ಯಕ್ತಿತ್ವವನ್ನು ಕಳೆದುಕೊಂಡAತಾಗಿದೆ ಎಂದರು. ಸಮಿತಿಯ ಅಧ್ಯಕ್ಷರಾದ ಜಿ. ಎಸ್ ಭಟ್, ಪ್ರಮುಖರಾದ ಗಣಪತಿ ಮಾನಿಗದ್ದೆ, ಕೆ ಎಸ್ ಭಟ್ ಆನಗೊಡ, ಕೆ ಟಿ ಹೆಗಡೆ, ರಾಜಶೇಖರ ಧೂಳಿ, ಆರ್ ಜಿ ಭಟ್ , ಶ್ರೀಮತಿ ಹೇಮಾ ಹೆಗಡೆ, ದಾಮೋದರ ಗೌಡ, ಗಣಪತಿ ನಾಯ್ಕ್,ಶ್ರೀ ಶಂಕರ ಧೂಳಿ,ಮುಂತಾದವರು ನುಡಿನಮನವನ್ನು ಅರ್ಪಿಸಿದರು. ಸಭೆಯಲ್ಲಿ ಸಮಿತಿಯ ಸದಸ್ಯರು, ಊರಿನ ನಾಗರಿಕರು,ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ