ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ತಾಲೂಕ ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷರಾದ ಫೈರೋಜ್ ಸಯ್ಯದ್ ರವರ ನೇತೃತ್ವದಲ್ಲಿ ಅಲ್ಪಸಂಖ್ಯಾತ ಸಂಘಟನಾ ಸಭೆಯನ್ನು ಮಾಡಲಾಯಿತು. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಮಜೀದ್ ಶೇಖರವರ ಆದೇಶದ ಪ್ರಕಾರ ಫಕೀರ್ ಸಾಬ್.ಎ.ಶೇಖ ಕಿರುವತ್ತಿ ಹಾಗೂ ನಿಸಾರ್ ಪಟೇಲ್ ಉದ್ಯಮ ನಗರ ಯಲ್ಲಾಪುರ ಇವರಿಗೆ ಯಲ್ಲಾಪುರ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಆದೇಶ ಪತ್ರವನ್ನು ನೀಡುವ ಮೂಲಕ ಪಕ್ಷದ ಸಂಘಟನೆ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗದ ಉಪಾಧ್ಯಕ್ಷರಾದ ರವಿ ನಾಯ್ಕ್, ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಪದಾಧಿಕಾರಿಗಳು, ಬ್ಯಾರಿ ಶೇಕ್, ಶಂಷಾದ್ ಅತ್ತಾರ, ಅನ್ವರ್ ಶೇಕ್, ತಾಲೂಕ ಪದಾಧಿಕಾರಿಗಳು, ಬಾನುಬಿ ಸೈಯದ್, ಜಾನಿ ಅಲ್ಫಾಂಸು, ನಿಸಾರ್ ಮುಲ್ಲಾ, ಎಮ್ ಡಿ ಗೌಸ್, ಎ ಆರ್ ಶೇಕ್, ಬರ್ನಾಲ್ ಅಲ್ಫಾಂಸು,ಮಕ್ತುಮ್ ಸಾಬ್ ಪಟ್ಟಣ ಪಂಚಾಯತ ಸದಸ್ಯರಾದ ಕೈಸರ್ ಸೈಯದ್ ಅಲಿ. ಸಾಮಾಜಿಕ ಜಾಲತಾಣ ಉಪಾಧ್ಯಕ್ಷರಾದ ಶ್ರೀಮತಿ ಮುಸರತ್ ಶೇಖ್ ಉಪಸ್ಥಿತಿದ್ದರು.
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ