May 4, 2024

Bhavana Tv

Its Your Channel

ಸಿ.ಎ.ಕಮಲಾಕರ ಭಟ್ಟರಿಂದ ಮಾತೃಭೂಮಿ ಪ್ರತಿಷ್ಠಾನಕ್ಕೆ ಒಂದು ಲಕ್ಷ ರೂ. ದೇಣಿಗೆ

ವರದಿ: ವೇಣುಗೋಪಾಲ ಮದ್ಗುಣಿ
ಯಲ್ಕಾಪುರ : ಚಾರ್ಟರ್ಡ ಅಕೌಂಟoಟ್ ಕಮಲಾಕರ ಭಟ್ ಕಳಚೆ ಇವರು ಮಾತೃಭೂಮಿ ಸೇವಾ ಪ್ರತಿಷ್ಠಾನಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಚಾರ್ಟರ್ಡ ಅಕೌಂಟAಟ್ ಸಂಸ್ಥೆಯಾಗಿರುವ ಅಂಕ್ ಅಸೋಸಿಯೇಟ್ ನ ಪಾಲುದಾರರಾಗಿರುವ ಕಮಲಾಕರ ಭಟ್ ಆಸ್ಟ್ರೇಲಿಯಾದ ಸಿಪಿಎ ಸಂಸ್ಥೆಯ ಸದಸ್ಯರೂ ಆಗಿದ್ದಾರೆ. ಮಾತೃಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಟ್ರಸ್ಟಿ ಹಾಗೂ ಆಧಾರಸ್ಥಂಭರಾದ ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದವರು.
ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀರಂಗ ಕಟ್ಟಿ, ಟ್ರಸ್ಟಿ ಜನಾರ್ಧನ ಹೆಬ್ಬಾರ, ಕಮಲಾಕರ ಭಟ್ ರನ್ನು ಅಭಿನಂದಿಸಿದ್ದಾರೆ.

error: