ವಿಜಯಪುರ ; ನಗರದಲ್ಲಿ ನಿರ್ಮಿಸಲಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪರಿಶೀಲನೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು, ಸಿಎಂ ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡಾಗಿನಿAದ ಬರಗಾಲ, ಪ್ರವಾಹ, ಎರಡು ಬಾರಿ ಕೋವಿಡ್ ಪರಿಸ್ಥಿತಿ ಬಂತು ಇದೆಲ್ಲವನ್ನು ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ, ಮುಂದೆ ಬರುವ ಚುನಾವಣೆಯನ್ನು ಸಹಿತ ನಾವು ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ನಾಯಕತ್ವ ಬದಲಾವಣೆ ವಿಚಾರ ಗಾಳಿ ಮಾತು, ಇದೆಲ್ಲದಕ್ಕೂ ಕಿವಿ ಗೊಡಬಾರದು. ವದಂತಿಗಳನ್ನು ಮಾಡುವವರು ಅನೇಕ ಜನ ಇರುತ್ತಾರೆ, ವದಂತಿಗಳೆಲ್ಲ ನಿಜ ಇರುವದಿಲ್ಲ, ಹೀಗೆ ವದಂತಿ ಹರಡಿಸುವವರು ಯಾರು ಏನು ಎಂಬುದು ನಾನು ಉಲ್ಲೇಖ ಮಾಡುವದಿಲ್ಲ, ಏನೇ ಇದ್ದರೂ ಸಿಎಂ ಅವರು ಉತ್ತಮ ಆಡಳಿತ ಕೊಟ್ಟಿದ್ದಾರೆ, ಅವ್ರಿಗೆ ಯಾವುದೇ ತೊಂದರೆ ಆಗಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಸಿಎಂ ಪರ ಬ್ಯಾಟ್ ಬೀಸಿದರು.
ಇನ್ನು ಸಿ ಎಂ ಬದಲಾವಣೆ ವಿಚಾರವಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ವಿಚಾರವಾಗಿ ಯತ್ನಾಳ ಹೆಸರು ಬಳಸದೆ ಪ್ರತಿಕ್ರಿಯಿಸಿದ ಸಚಿವೆ ಶಶಿಕಲಾ ಜೊಲ್ಲೆ ಯಾರು ಏನೂ ಅವರ ಮನಸ್ಸಿಗೆ ತಿಳಿಯುತ್ತದೆ ಹಾಗೆ ಅವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ, ಹೈ ಕಮಾಂಡ್ ಇದೆಲ್ಲವನ್ನು ಗಮನಿಸುತ್ತಿದೆ ಎಂದು ಟಾಂಗ್ ನೀಡಿದರು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅವರು ಸಿಎಂ ಬದಲಾವಣೆಯ ಹೇಳಿಕೆ ಕೊಡಬಾರದು. ನಾನು ಸಿಎಂ ಅವರ ಕುರಿತು ಹೇಳಿಕೆ ಕೊಡುವವರ ಬಗ್ಗೆ ಮಾತನಾಡಲ್ಲ ಎಂದರು.
ನಾನು ಇನ್ನೂ ಬಹಳ ಚಿಕ್ಕವಳು, ನಾನೇನು ಅವರೊಂದಿಗೆ ಮಾತನಾಡುವದಿಲ್ಲ ಎಂದ ಸಚಿವೆ ಶಶಿಕಲಾ ಜೊಲ್ಲೆ ಉತ್ತರಿಸಿದರು…
ವರದಿ ಬಿ ಎಸ್ ಹೊಸೂರ.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ