April 29, 2024

Bhavana Tv

Its Your Channel

ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನವನ್ನು ಪಾವತಿಸಲು ಮತ್ತು ಕೋವಿಡ ರಜೆ ವೇತನವನ್ನು ಪಾವತಿಸಲು ಮನವಿ

ವಿಜಯಪೂರ; ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನಲ್ಲಿ ಇಂದು ಹಾಸ್ಟಲ್ ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನವನ್ನು ಪಾವತಿಸಲು ಹಾಗೂ ಕೊವಿಡ್ ರಜೆ ವೇತನವನ್ನು ಪಾವತಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ತಹಶಿಲ್ದಾರರವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಜಿಲ್ಲಾ ಅಧ್ಯಕ್ಷ ಹುಲುಗಪ್ಪ ಚಲವಾದಿ ೨೦೨೦ ಮಾರ್ಚ ತಿಂಗಳಿAದ ಇಲ್ಲಿಯವರೆಗೆ ವೇತನವನ್ನು ಪಾವತಿಸಬೇಕು ಸರ್ಕಾರವು ಈ ನೌಕರರಿಗೆ ಲಾಕಡೌನ ರಜೆ ವೇತನವನ್ನು ಕೂಡುವದಾಗಿ ಆಶ್ವಾಸನೆ ನೀಡಿ ಇಲ್ಲಿಯವರೆಗೆ ವೇತನವನ್ನು ಪಾವತಿಸಿಲ್ಲ ಕಳೆದ ೧೧ತಿಂಗಳು ವಸತಿ ನಿಲಯಗಳು ಬಂದ ಇದ್ದಿದರಿಂದ ದುಡಿಯಲು ಕೆಲಸವಿಲ್ಲದೆ ಹೊರಗುತ್ತಿಗೆ ನೌಕರರು ಅತ್ಯಂತ ಸಂಕಷ್ಟದಲ್ಲಿ ಕಾಲ ಕಳೆಯುವಂತಾಗಿದೆ.ವಿಜಯಪೂರ ಜಿಲ್ಲೆಯಲ್ಲಿ ೨೦೧೯ ರಲ್ಲಿ ನೇಮಕಾತಿಯಿಂದ ಕೆಲಸ ಕಳೆದುಕೊಂಡ ನೌಕರರಿಗೆ ಹೊಸದಾಗಿ ಪ್ರಾರಂಭಿಸುವ ವಸತಿ ನಿಲಯಗಳಲ್ಲಿ ಸೇವೆಯಲ್ಲಿ ಮುಂದುವರೆಸುವುದಾಗಿ ಸರಕಾರ ಒಪ್ಪಿಕೊಂಡಿದ್ದು ಆದರೆ ಈ ನೌಕರರು ಕೂಡಾ ದುಡಿಯಲು ಕೆಲಸವಿಲ್ಲದೆ ಪರದಾಡುವಂತಾಗಿದೆ ಆ ಹೊರಗುತ್ತಿಗೆ ನೌಕರರಿಗೂ ಲಾಕ್ ಡೌನ್ ರಜೆ ವೇತನ ಪಾವತಿಸಬೇಕೆಂದು ಒತ್ತಾಯಿಸುತ್ತೆವೆ. ಕಾರಣ ಸಂಬAಧಪಟ್ಟ ಅಧಿಕಾರಿಗಳು ಕೂಡಲೆ ವೇತನವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಹುಲುಗಪ್ಪ ಚಲವಾದಿ.ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುಣ ಚಲವಾದಿ.ಶಾಬವ್ವ ದೊಡಮನಿ.ರಾಜು ಬಿ ಎ.ಬಸಮ್ಮ ಪಾತೊಟಿ.ಭಾರತಿ ಚಲವಾದಿ.ಶಿವಪ್ಪ ದೊಡಮನಿ.ರಮೇಶ ದೊಡಮನಿ.ಸುರೇಖಾ ರಜಪೂತ.ಶರಣಮ್ಮ ಜಟ್ಟಗಿ.ಶ್ವೇತಾ ಹುಣ್ಣಿಬಾವಿ.ನಜೀರ ಕಸಾಬ. ಬೀಮು ಚಲವಾದಿ.ಸುಜಾತಾ ವಡ್ಡರ.ಕಸ್ತೂರಿ ಹೊಸಮನಿ.ರಾಜೇಶ್ವರಿ ಚಲವಾದಿ.ಗುರುದೇವ ಲಾರನಳ್ಳಿ.ರೇಣುಕಾ ಭಜಂತ್ರಿ.ಮಹಾದೇವಿ ಚಲವಾದಿ.ಗೌರಕ್ಕ ಬಿಳೂರ.ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ ;ಬಿ ಎಸ್ ಹೊಸೂರ. ವಿಜಯಪೂರ.

error: