ವಿಜಯಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಕೆ. ಪುಟ್ಟಸ್ವಾಮಿಗೌಡ ಅವರ ಆದೇಶದ ಮೇರೆಗೆ ಹಾಗೂ ಪರಸನಗೌಡ ಬಿ ಪಾಟೀಲ ಕೆಪಿಸಿಸಿ ಕಾರ್ಮಿಕ ವಿಭಾಗ, ಸ್ಟೇಟ್ ಕಮಿಟಿಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಹಾಗೂ ವಿಜಯಪುರ ಜಿಲ್ಲೆಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಬಂಗಾರೆಪ್ಪ ಜ ದಶವಂತ ಅವರ ನೇತೃತ್ವದಲ್ಲಿ ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದ ಗ್ರಾಮದ ಶ್ರೀ ಮರಗಮ್ಮ ದೇವಿಯ ದೇವಸ್ಥಾನದಲ್ಲಿ ವಿಠೋಬಾ ರಾಜು ದಶವಂತ ಇವರನ್ನು ವಿಜಯಪೂರ ಜಿಲ್ಲೆಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ಸ್ಟೇಟ್ ಕಮಿಟಿಯ ಕಾರ್ಯದರ್ಶಿಗಳಾದ ಪರಸನಗೌಡ ಬಿ ಪಾಟೀಲ ಮಹಾಂತೇಶ ಸ ಹಿಪ್ಪರಗಿ, ಮರಗಮ್ಮ ದೇವಿಯ ಅಧ್ಯಕ್ಷರಾದ ಶ್ರೀ ಸಿದರಾಯ ಕಲ್ಲಪ್ಪ ದಶವಂತ, ಭಾಗಣ್ಣ ದಶವಂತ, ಕಲ್ಲಪ್ಪ ದಶವಂತ, ನಿಜಪ್ಪ ದಶವಂತ,ಹಣಮAತ ಕಟ್ಟಿಮನಿ. ರಾಹುತರಯ ಬನಸೋಡೆ, ಗಣಪತಿ ದಶವಂತ, ತಮ್ಮರಾಯಗೌಡ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ ಬಿ ಎಸ್ ಹೊಸೂರ.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ