ವಿಜಯಪುರ: ದಿನಾಂಕ ೮/೧೦/೨೦೨೧ರಂದು ವಿಜಯಪುರ ನಗರದ ಕಿತ್ತೂರು ರಾಣಿ ಚೆನ್ನಮ್ಮ ಮಂಡಲ ಕಚೇರಿಯಲ್ಲಿ ನಡೆದ ಕಾರ್ಯಕ್ರಮ ,ಜೆಡಿಎಸ್ ಬಿಟ್ಟು ಅಧಿಕೃತವಾಗಿ ಸೇರ್ಪಡೆಗೊಂಡ ಮನಗೂಳಿಯ ಅಪ್ಪುಗೌಡ ಪಾಟೀಲ್
ಬಸವನ ಬಾಗೇವಾಡಿ ಮತಕ್ಷೇತ್ರದ ಪ್ರಭಾವಿ ರಾಜಕಾರಣಿಯ ಮುಖಂಡರಾದ ಅಪ್ಪುಗೌಡ ಪಾಟೀಲ್ ಮನಗೂಳಿ ಅವರು ತಮ್ಮ ಅಪಾರವಾದ ಬೆಂಬಲರದೊAದಿಗೆ ಮನಗೂಳಿ ಗ್ರಾಮದಿಂದ ಕಾರ್ಯಕರ್ತರೆಲ್ಲರೂ ಜೈಕಾರ ಹಾಕಿಕೊಂಡು ೨೨ ಕಿಲೋಮೀಟರ್ ಬೈಕ್ ಗಳಲ್ಲಿ, ಕಾರುಗಳಲ್ಲಿ,ಕಾರ್ಯಕರ್ತರು ಹೋಗಿ ಜೆಡಿಎಸ್ ಬಿಟ್ಟು ಬಿಜೆಪಿಗೆ ಅಧಿಕೃತವಾಗಿ ವಿಜಾಪುರದಲ್ಲಿ ಸೇರ್ಪಡೆಗೊಂಡರು.
ಬಿಜೆಪಿಯ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ ಅವರು ಬಿಜೆಪಿಯ ಬಾವುಟವನ್ನು ಅಪ್ಪುಗೌಡ ಪಾಟೀಲರ ಕೈಗೆ ನೀಡುವುದರ ಮೂಲಕ ತಮ್ಮ ಪಕ್ಷಕ್ಕೆ ಬರಿಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಟೆಂಗಿನಕಾಯಿ, ಸಂಸದರಾದ ರಮೇಶ್ ಜಿಗಜಿಣಗಿ, ನೀರಾವರಿ ಸಚಿವರಾದ ಗೋವಿಂದ ಕಾರಜೋಳ, ವಿಜಯಪುರ ನಗರದ ಶಾಸಕರಾದಬಸನಗೌಡ ಪಾಟೀಲ್ ಯತ್ನಾಳ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸೇರಿದಂತೆ ಬಸವನ ಬಾಗೇವಾಡಿ ಮತಕ್ಷೇತ್ರದ ಹಲವಾರು ರಾಜಕೀಯ ಮುಖಂಡರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ: ಮಲ್ಲಿಕಾರ್ಜುನ ಬುರ್ಲಿ
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ