ಹೊನ್ನಾವರ: ಲಾರಿಗಳಲ್ಲಿ 12 ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಾಹನ ಸಮೇತ ಹೊನ್ನಾವರ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ
ಹೊನ್ನಾವರ ಪೊಲೀಸ್ ಸ್ಟೇಷನ್ ಸಮೀಪ ಮಂಗಳವಾರ ತಡರಾತ್ರಿ ನಡೆದಿದೆ.
ಮಹಮ್ಮದ್ ಜಾಫರ್ ಚಿರ್ತದುರ್ಗ, ಹಾವೇರಿಯ ಹನುಮಂತ ಬರ್ಮಗೌಡ ಸವಣೂರು, ಸುರೇಶ ಹನುಮಂತಪ್ಪ ಕಟ್ಟಿಗೇರ ಆರೋಪಿಗಳಾಗಿದ್ದಾರೆ.
ಇವರು ಅಧಿಕೃತ ಯಾವುದೇ ಪರವಾನಗಿ ಹೊಂದದೇ, ಲಾರಿಗಳಲ್ಲಿ 12 ಜಾನುವಾರುಗಳನ್ನು ತುಂಬಿ ಸಾಗಾಟ ಮಾಡುತ್ತಿದ್ದರು. ಸುಮಾರು 1 ಲಕ್ಷ 38 ಸಾವಿರ ರೂ ಬೆಲೆ ಬಾಳುವ ಜಾನುವಾರುಗಳನ್ನು ಸಿರಸಿ ಕಡೆಯಿಂದ ಭಟ್ಕಳ ಕಡೆಗೆ ಪರವಾನಗಿ ಪಡೆಯದೆ ಸಾಗಾಟ ಮಾಡುತ್ತಿರುವಾಗ ಹೊನ್ನಾವರ ಪೊಲೀಸರು ದಾಳಿ ನಡೆಸಿದ್ದಾರೆ. ಜಾನುವಾರುಗಳಿಗೆ ಸರಿಯಾದ ಗಾಳಿ ಬೆಳಕು ಇಲ್ಲದೆ, ಜಾನುವಾರುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡದೇ. ಹಿಂಸಾತ್ಮಕವಾಗಿ ತುಂಬಿಕೊAಡು ಜಾನುವಾರುಗಳನ್ನು ವಧೆ ಮಾಡುವ ಉದ್ದೇಶಕ್ಕೆ, ಲಾರಿಗಳಲ್ಲಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಹೊನ್ನಾವರ ಪಿಎಸ್ಐ ಮಹಾಂತೇಶ ನಾಯಕ ಹಾಗೂ ಆನಂದಮೂರ್ತಿ ಅವರು ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ.
More Stories
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು