ಹೊನ್ನಾವರ :- 2021-22 ನೇ ಸಾಲಿನಲ್ಲಿ ನಡೆದ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ 4 ವಿದ್ಯಾಥಿüðಗಳು ತೇರ್ಗಡೆ ಹೊಂದಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ . ಸಿಸ್ಕೊ ಸಂಭ್ರಮ ಬೆಂಗಳೂರು ಇವರ ಸಹಕಾರ & ಕುಮಟಾ – ಹೊನ್ನಾವರ ತಾಲುಕಿನ ಹಲವು ಸಂಪನ್ಮೂಲ ವ್ಯಕ್ತಿಗಳು ತರಬೇತಿ ಹಾಗೂ ಮಾರ್ಗದರ್ಶನ ನೀಡಿರುತ್ತಾರೆ . ಈ ವಿದ್ಯಾರ್ಥಿಗಳು 9ನೇ ತರಗತಿಯಿಂದ 12ನೇ ತರಗತಿಯವರೆಗೆ ಮಾಸಿಕ 1000/ – ದಂತೆ 48000/ ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ
ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಕುಮಾರಿ ಅಶ್ವಿನಿ ಈರು ಗೌಡ , ಧನ್ಯಾ ತಿಮ್ಮಣ್ಣ ನಾಯ್ಕ , ಮೇಘಾ ರಾಮ ಗೌಡ , ಅಮೃತ ಎಮ್ . ಶೇಟ್ . ಇವರಿಗೆ ಹಾಗೂ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿಗಳಿಗೆ ಮಾನ್ಯಕ್ಷೇತ್ರಶಿಕ್ಷಣಾಧಿಕಾರಿಗಳು ಹೊನ್ನಾವರ ಸಿಸ್ಕೊ ಸಂಭ್ರಮ ಬೆಂಗಳೂರು ಹಾಗೂ ಊರನಾಗರಿಕರು ಅಭಿನಂದಿಸಿದ್ದಾರೆ ಶ್ರೀ ಚೆನ್ನಕೇಶವ ವಿದ್ಯಾಸಂಸ್ಥೆಯ ಅಧ್ಯಕ್ಷರು ಗಜಾನನ ಹೆಗಡೆಯವರು ಆಡಳಿತ ಮಂಡಳಿಯ ಸದಸ್ಯರು , ಮುಖ್ಯಾಧ್ಯಾಪಕರಾದ ಎಲ್. ಎಮ್. ಹೆಗಡೆ ಯವರು ಮತ್ತು ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ.
More Stories
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು