ಭಟ್ಕಳ: ಕಳೆದ ಸೆ. 17ರಂದು ಸೌದೆ ಸಂಗ್ರಹಿಸಲು ಮನೆಯಿಂದ ಹೊರಟ ಮಹಿಳೆಯೋರ್ವರು ಮನೆಗೆ ಹಿಂದಿರುಗದೇ ನಾಪತ್ತೆಯಾಗಿರುವ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.
ಕಾಣೆಯಾದ ಮಹಿಳೆಯನ್ನು ಮುರುಡೇಶ್ವರ ನಿವಾಸಿ ಮಾದೇವಿ ಸುಕ್ರಯ್ಯ ದೇವಡಿಗ (57) ಎಂದು ಗುರುತಿಸಲಾಗಿದೆ. ಮನೆಯಿಂದ ಹೋಗುವಾಗ ಮಹಿಳೆಯು ಹಳದಿ ಬಣ್ಣದ ಸೀರೆ, ಕೇಸರಿ ಬಣ್ಣದ ರವಿಕೆ, ಹಳದಿ ಬಣ್ಣದ ಚಪ್ಪಲಿ, ಕೊರಳಲ್ಲಿ ಕರಿಮಣಿ ಸರ, ಕಿವಿಯಲ್ಲಿ ಕಿವಿಯೋಲೆ, ಹಣೆಯಲ್ಲಿ ಕುಂಕುಮ ಧರಿಸಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಕಾಣೆಯಾದ ಮಹಿಳೆಯ ಮಗ ದಿನೇಶ ಸುಕ್ರಯ್ಯ ದೇವಡಿಗ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರನ್ನು ದಾಖಲಿಸಿ ಕೊಂಡ ಮುರ್ಡೇಶ್ವರ ಠಾಣೆ ಪಿ.ಎಸೈ ಪರಮಾನಂದ ಕೊಣ್ಣೂರು ಪ್ರತ್ಯೇಕ ತಂಡವನ್ನು ರಚಿಸಿ ಕಳೆದ ಎರಡೂ ಮೂರು ದಿವಸ ದಿಂದ ಕಳೆದು ಹೋದ ಮಹಿಳೆಯನ್ನು ಸ್ಥಳೀಯರ ಸಹಾಯದಿಂದ ಅರಣ್ಯ ಪ್ರದೇಶದಲ್ಲಿ ಎಷ್ಟೇ ಹುಡುಕಾಟ ನಡೆಸಿದರು ಇನ್ನೂ ಪತ್ತೆ ಯಾಗಿಲ್ಲ ಎಂಬುದೇ ಬೇಸರದ ಸಂಗತಿ ಯಾಗಿದೆ.
More Stories
ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ಹಣ ಕ್ಷಣಾರ್ಧದಲ್ಲಿ ಮಾಯ,
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್