ಹೊನ್ನಾವರ ನಗರದ ಮಧ್ಯಭಾಗದ ಚಾರೋಡಿ ಮೇಸ್ತ ಸಮಾಜಕ್ಕೆ ಸೇರಿದ ಶ್ರೀ ಶಾರದಾಂಬಾ ಚಂದ್ರಮೌಳೀಶ್ವರ ದೇವಾಲಯದ ಶಿಲಾಮಯ ನೂತನ ಕಟ್ಟಡ ನಿರ್ಮಾಣಕ್ಕೆ ಹಿರಿಯ ಸಾಮಾಜಿಕ ಕಾರ್ಯಕರ್ತ ಡಾ| ಜಿ.ಜಿ. ಸಭಾಹಿತ ಶಿಲಾನ್ಯಾಸ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಧಾರ್ಮಿಕ ಕೇಂದ್ರಗಳು ಸುಸಜ್ಜಿತವಾಗಿದ್ದರೆ ಸಮಾಜಕ್ಕೆ ಕ್ಷೇಮ, ಇಂತಹ ದೇವಾಲಯಗಳು ಸಮಾಜದ ಒಗ್ಗಟ್ಟಿಗೆ, ಅಭಿವೃದ್ಧಿಗೆ ಕಾರಣವಾಗುತ್ತದೆ. ಚಾರೋಡಿ ಮೇಸ್ತ ಸಮಾಜದವರು ಸಂಕಲ್ಪಿಸಿದ ಈ ದೇವಾಲಯ ಮೂಲದಲ್ಲಿ ಶೃಂಗೇರಿ ಶ್ರೀಗಳಿಂದ ಪ್ರತಿಷ್ಠಾಪಿಸಲ್ಪಟ್ಟಿತು. ಎಲ್ಲ ಸಮಾಜದವರು ಭಕ್ತಿಯಿಂದ ನಡೆದುಕೊಳ್ಳುವ ಈ ದೇವಾಲಯದ ಕೆಲಸ ಬೇಗ ಮುಗಿದು ಸಮಾಜ ಉನ್ನತಿಗೊಳ್ಳಲಿ ಎಂದು ಹಾರೈಸಿದರು.
ಉದ್ಯಮಿ ಜೆ.ಟಿ. ಪೈ ಮಾತನಾಡಿ, ಸಾಹಸಿ ಸಮಾಜದ ಏಳ್ಗೆಗೆ ದೇವಾಲಯ ಕಾರಣವಾಗಲಿ, ಧಾರ್ಮಿಕ ಭಾವನೆ ಎಲ್ಲ ಸಮಾಜದಲ್ಲಿ ತುಂಬಲಿ ಎಂದು ಹಾರೈಸಿದರು.
ವಿದ್ವಾಂಸ ಪತಂಜಲಿ ವೀಣಾಕರ ಮಾತನಾಡಿ, ಶಾಸ್ತೊçÃಕ್ತವಾಗಿ ನಿರ್ಮಿಸಲ್ಪಡುವ ಈ ದೇವಾಲಯಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು.
ಟ್ರಸ್ಟಿಗಳಾದ ಲಕ್ಷ್ಮಣ ಜಾಯಾ ಮೇಸ್ತ, ಅಚ್ಚುತ ದೇವಪ್ಪ ಮೇಸ್ತ ಮತ್ತು ಚಾರೋಡಿ ಮೇಸ್ತ ಸಮಾಜದ ಗಣ್ಯರು ಉಪಸ್ಥಿತರಿದ್ದರು. ಗೋಕರ್ಣದ ಕೃಷ್ಣ ಭಟ್ಟ ಷಡಕ್ಷರಿ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.
More Stories
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೂಜಳ್ಳಿಯ ಹಿರಿಯ ಜೀವ ಅನಸೂಯಾ ಹೆಗಡೆ,
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,