ಹೊನ್ನಾವರ: ಯಕ್ಷಲೋಕ (ರಿ.) ಹಳದೀಪುರ, ಸ್ಫೂರ್ತಿರಂಗ ಹೊನ್ನಾವರ ಮತ್ತು ಶ್ರೀ ಜನಾರ್ದನ ಶೆಟ್ಟಿ ಗಾಣಗೆರೆ ಬಳಗ ಇವುಗಳ ಸಂಯುಕ್ತಆಶ್ರಯದಲ್ಲಿ ಜಾಂಬವತಿ ಪರಿಣಯ ತಾಳಮದ್ದಳೆ ಯುವಕಲಾವಿದರಿಂದ ಯಶಸ್ವಿಯಾಗಿ ನಡೆಯಿತು. ಹಿಮ್ಮೇಳದಲ್ಲಿ ಕಡತೋಕಾ ಗೋಪಾಲಕೃಷ್ಣ ಭಾಗವತ ಹಳದೀಪುರ, ಗಣಪತಿ ಹೆಗಡೆ ಹಂದಿಮೂಲೆ ಭಾವಪೂರ್ಣವಾಗಿ ಭಾಗವತಿಕೆ ನಿರ್ವಹಿಸಿದರು.ಮದ್ದಳೆಯಲ್ಲಿ ಶ್ರೀಪಾದ ಭಟ್ಟ ಕಡತೋಕಾ ಮತ್ತುಗಣಪತಿ ಹೆಗಡೆ ಹಂದಿಮೂಲೆ ಶೃತಿ ಲಯ ಬದ್ಧವಾಗಿ ಸಾಥ ನೀಡಿದರು.
ಮುಮ್ಮೇಳದಲ್ಲಿ ಬಲರಾಮನಾಗಿ ಶಂಕರ ಭಟ್ಟಗಾಣಗೆರೆ, ನಾರದಬಾಗಿಅಕ್ಷಯ ಹೆಗಡೆ, ಕೃಷ್ಣನಾಗಿ ಸುಬ್ರಹ್ಮಣ್ಯ ಭಟ್ಟ, ಜಾಂಬವನಾಗಿ ಜನಾರ್ದನ ಶೆಟ್ಟಿ ಪ್ರಸಂಗದಆಶಯ ಮತ್ತು ಉದ್ದೇಶಗಳನ್ನು ಸಮರ್ಥವಾಗಿ ಪಾತ್ರ ನಿರ್ವಹಿಸಿ ಭಕ್ತಿ ಪಾರಮ್ಯ ಸಾರಿದರು.ಎಲ್ಲರನ್ನು ಎಮ್.ಎಮ್.ಹೆಗಡೆ ಸ್ವಾಗತಿಸಿದರು. ಗಣೇಶ ಎನ್.ಹೆಗಡೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಡಾ.ಎಸ್.ಡಿ.ಹೆಗಡೆ ಪಾತ್ರ ನಿರ್ವಹಿಸಿದ ಯುವಕಲಾವಿದರಿಗೆ ಪುಸ್ತಕ ನೀಡಿ ಗೌರವಿಸದರು.
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್