ಹೊನ್ನಾವರ: ತುಮಕೂರಿನ ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಹಾಸ್ಪಿಟಲ್ ಆವರಣದಲ್ಲಿ ನಡೆದ 3 ನೇ ರಾಷ್ಟ್ರ ಮಟ್ಟದ ಚದುರಂಗವು [ಚೆಸ್] ದಿನಾಂಕ 1 ನೇ ಡಿಸೆಂಬರ್ ನಿಂದ 4 ನೇ ಡಿಸೆಂಬರ್ 2022 ರ ವರೆಗೆ ನಡೆದ ಪಂದ್ಯಾವಳಿಯಲ್ಲಿ , ತಮಿಳುನಾಡು , ಆಂಧ್ರಪ್ರದೇಶ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಉತ್ತರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಡೆಲ್ಲಿ, ಪಾಂಡಿಚೆರಿ, ಪಂಜಾಬ್, ಹೀಗೆ ಒಟ್ಟು 13 ರಾಜ್ಯಗಳಿಂದ 71 ಸ್ಪರ್ಧಿ ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
9 ಸುತ್ತಿನ ಈ ಪಂದ್ಯಾವಳಿಯಲ್ಲಿ 7.5 ಅಂಕಗಳಿಸಿದ ಸೋಲಿಲ್ಲದ ಸರದಾರ ಹೊನ್ನಾವರದ ಸಮರ್ಥ ಜಗದೀಶ್ ರಾವ್ ರಾಷ್ಟ್ರೀಯ ಚಾಂಪಿಯನ್ ಆಗಿ ಮಿಂಚಿದ್ದಾ ನೇ. ಈತನು ಹೊನ್ನಾವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಎಮ್ ಕಾಂ ವಿದ್ಯಾರ್ಥಿ ಹಾಗೂ ಕೆನರಾ ಬ್ಯಾಂಕ್ ಕರೆನ್ಸಿ ಚೆಸ್ಟ್ ಹೊನ್ನಾವರದಲ್ಲಿ ಉದ್ಯೋಗಿ ಜಗದೀಶ್ ರಾವ್ ಹಾಗೂ ಹೊನ್ನಾವರ ಸರಕಾರಿ ಐ ಟಿ ಐ ತರಬೇತಿ ಅಧಿಕಾರಿ ವಿನುತಾ ಭಟ್ ಇವರ ಹೆಮ್ಮೆಯ ಪುತ್ರ.
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್