ಭಟ್ಕಳ- ಮೊಹಮ್ಮದ ಜಬ್ರುದ್ದ ಖತೀಬ ಮೋಹಿದ್ದಿನ ಸಾಬ , ಬಂದರ ರೋಡ, ಮುಗ್ದುಂ ಕಾಲನಿ. 5ನೇ ಕ್ರಾಸ್, ಭಟ್ಕಳ ಇವರು ಸೋಮವಾರ ಭಟ್ಕಳ -ಹೊನ್ನವಾರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದಾರೆ. ಈವರು 50ಕ್ಕೂ ಹೆಚ್ಚು ತಮ್ಮ ಮುಸ್ಲಿಂ ಸಮುದಾಯದ ಬೆಂಬಲಿಗರೊAದಿಗೆ ಭಟ್ಕಳ ಎ.ಸಿ ಕಚೇರಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ಇಂದು ನಾಮಪತ್ರ ಸಲ್ಲಿಸಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿ ಭಟ್ಕಳ -ಹೊನ್ನವಾರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ದ್ರಷ್ಟಿಯಿಂದ ಸ್ಫರ್ಧೆ ಮಾಡಿರುವುದಾಗಿ ತಿಳುಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಅಂತೋನ ಜುಜೆ ಲೂಯಿಸ್, ವಕೀಲ ಸಾವೇರ್ ಲೂಯಿಸ್ ಮುಂತಾದವರು ಉಪಸ್ಥಿತರಿದ್ದರು.
ಇಂದು ಮೂರು ನಾಮಪತ್ರ ಸಲ್ಲಿಕೆ: ಇಂದು ದಿನಾಂಕ: 17-04-2023 ರಂದು 79-ಭಟ್ಕಳ ವಿಧಾನಸಭಾ ಕ್ಷೇತ್ರ ಕ್ಕೆ ಸಂಬ0ಧಿಸಿದ0ತೆ ಈ ಕೆಳಗಿನ ಅಭ್ಯರ್ಥಿಗಳಿಂದ ನಾಮಪತ್ರಗಳು ಸಲ್ಲಿಕೆಯಾಗಿರುತ್ತದೆ ಎಂದು ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಮಮತಾದೇವಿ ಜೆ.ಎಸ್ ಮಾಹಿತಿ ನೀಡಿದ್ದಾರೆ.
ಮಹಮ್ಮದ ಝಬರೂದ ಖತೀಬ ಬಂದರ ರೋಡ, ಮುಗ್ದುಂ ಕಾಲನಿ. 5ನೇ ಕ್ರಾಸ್, ಭಟ್ಕಳ ಸ್ವತಂತ್ರ ಅಭ್ಯರ್ಥಿ. ಯೋಗೇಶ ನಾಯ್ಕ ನಂ.8ಎ,ಬೇ0ಗ್ರೆ. ಭಟ್ಕಳ ಉತ್ತಮ ಪ್ರಜಾಕೀಯ ಪಾರ್ಟಿ. ಮಂಕಾಳ ವೈದ್ಯ, ಕಾಯ್ಕಿಣಿ, ಭಟ್ಕಳ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್.
More Stories
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್
ಸಿದ್ದಾರ್ಥ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಾಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಉತ್ತಮ ಸಾಧನೆ