April 29, 2024

Bhavana Tv

Its Your Channel

ಜೆಡಿಎಸ್ ವರಿಷ್ಠರಾದ ಎಚ್.ಡಿ ದೇವೇಗೌಡ ಅವರಿಂದ ಬಿ ಫಾರ್ಮ್ ಪಡೆದುಕೊಂಡ ಭಟ್ಕಳ-ಹೊನ್ನಾವರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಕೀಲ ನಾಗೇಂದ್ರ ನಾಯ್ಕ

ಬೆಂಗಳೂರು- ಸೋಮವಾರ ಜೆ.ಡಿ.ಎಸ್ ಪಕ್ಷದ ಭಟ್ಕಳ-ಹೊನ್ನಾವರ ಕ್ಷೇತ್ರದ ಅಭ್ಯರ್ಥಿಯಾಗದ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಅವರು ದೇಶದ ಮಾಜಿ ಪ್ರಧಾನಿ, ಭಾರತ ಕಂಡ ಅತ್ಯದ್ಭುತ ಮುತ್ಸದ್ದಿ, ಹಿರಿಯ ರಾಜಕಾರಣಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀ ಎಚ್.ಡಿ.ದೇವೆಗೌಡರಿಂದ ಬೆಂಗಳೂರರಿನ ಅವರ ನಿವಾಸದಲ್ಲಿ “ಬಿ ಫಾರ್ಮ್” ಪಡೆದುಕೊಂಡರು.
ಬಿ ಫಾರ್ಮ್ ನೀಡಿ ನಂತರ “ಆನಂದವಾಗಿ ಗೆಲ್ತಿಯಾ, ನಿನಗೆ ಅನ್ಯಾಯ ಆಗಿದೆ..ಉಡುಪಿಯ ಶ್ರೀಕೃಷ್ಣ ಕಣ್ತೆರೆದು ನಿನ್ನ ಗೆಲ್ಲಿಸ್ತಾನೆ” ಎಂದು ಬಾಯ್ತುಂಬಿ ಹಿರಿಯರು ಹರಿಸಿ ಬಿ ಫಾರ್ಮ್ ಕೊಟ್ಟು ಆಶೀರ್ವದಿಸಿದರು. ಏಪ್ರಿಲ್ ೧೯ ರಂದು ಬೆಳ್ಳಿಗೆ ೧೧ ಗಂಟೆಗೆ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಅವರು ಭಟ್ಕಳ ಜೆಡಿಎಸ್ ಅಭ್ಯರ್ಥಿಯಾಗಿ ಭಟ್ಕಳ ಚುನಾವಣಾದಿಕಾರಿಗೆ ನಾಮಪತ್ರ ಸಲ್ಲುಸಲ್ಲಿದ್ದಾರೆ.

error: