April 29, 2024

Bhavana Tv

Its Your Channel

ದುಷ್ಕರ್ಮಿಗಳ ಗುಂಡೇಟಿಗೆ ಮಂಗಳೂರು ಮೂಲದ ಪಬ್ ಮಾಲೀಕ ಬಲಿ

ಬೆಂಗಳೂರು: ದುಷ್ಕರ್ಮಿಗಳ ಗುಂಡೇಟಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಬ್ರಿಗೆಡ್ ರೋಡ್ ನಲ್ಲಿರುವ ಡ್ಯುಯೆಟ್ ಲೇಡಿಸ್ ಪಬ್ ನ ಮಾಲೀಕ ಮನೀಷ್ ಶೆಟ್ಟಿ ಮೃತ ವ್ಯಕ್ತಿ. ಮೃತ ಮನೀಷ್ ಮಂಗಳೂರು ಮೂಲದವನಾಗಿದ್ದು, ಬನ್ನಂಜೆ ರಾಜನ ಆಪ್ತ. ಚೆಮ್ಮನ್ನೂರು ಜ್ಯುವೆಲ್ಲರ್ಸ್ ದರೋಡೆ ಪ್ರಮುಖ ಆರೋಪಿ. ಅಲ್ಲದೆ ಈತನ ವಿರುದ್ಧ ಹಲವಾರು ಪ್ರಕರಣಗಳಿವೆ.
ಬೆಂಗಳೂರಿನ ರೆಸ್ಟ್ ಹೌಸ್‌ ಪಾರ್ಕ್ ಬಳಿ ಸುಮಾರಯ 9 ಗಂಟೆಯ ವೇಳೆಗೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಡಬಲ್ ಬ್ಯಾರೆಲ್ ಗನ್ ನಿಂದ ಗುಂಡು ಹೊಡೆದಿದ್ದಾರೆ. ಗಾಯಗೊಂಡ ಮನೀಷ್ ಶೆಟ್ಟಿಯನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಬೆಂಗಳೂರಿನ ಕಬ್ಬನ್‌ಪಾರ್ಕ್ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.

error: